‘ಆಡಳಿತಾರೂಢ ಸರ್ಕಾರವು ಪೌರತ್ವ ತಿದ್ದುಪಡಿ, ಕೃಷಿ, ಗೋ ಹತ್ಯೆ ನಿಷೇಧ ಹೀಗೆ ಹಲವು ರೈತ ಹಾಗೂ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಸರ್ಕಾರವೇ ಕೋಮುವಾದ ಮತ್ತು ಭಯೋತ್ಪಾದನೆಗೆ ಇಳಿದಿದೆ. ಇದು ನಿಲ್ಲಬೇಕು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 16 ಮಂದಿಯನ್ನು ಬಂಧಿಸಲಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಲಾಗಿದೆ. ಅವರಿಗೆ ಜಾಮೀನು ನೀಡಲು ನಿರಾಕರಿಸಲಾಗುತ್ತಿದೆ. ಇದು ಖಂಡನೀಯ’ ಎಂದು ಸದಸ್ಯರು ಕಿಡಿಕಾರಿದರು.