ಸಂಗ್ರಹಾಗಾರದಲ್ಲಿ ಜಲಚರಗಳು, ಆಮ್ಲಜನಕ ಹೆಚ್ಚು ಬಿಡುಗಡೆ ಮಾಡುವ ಜಲಸಸ್ಯಗಳನ್ನು ಬೆಳೆಸಬಹುದು. ಮೀನು, ಏಡಿ ಸಾಕಣೆಗೂ ಬಳಸಬಹುದು. ಅಥವಾ ಈ ನೀರನ್ನು ವಿಶ್ವವಿದ್ಯಾಲಯ ಆವರಣದ ಜೈವಿಕ ಉದ್ಯಾನಕ್ಕೆ, ಕುಡಿಯಲು ಹೊರತಾದ ಉದ್ದೇಶಕ್ಕೆ ಬಳಸಬಹುದು. ಇನ್ನೂ ಹೆಚ್ಚುವರಿಯಾಗುವ ಶುದ್ಧ ನೀರನ್ನು ವೃಷಭಾವತಿಗೆ ಬಿಡಬಹುದು ಎಂದು ಈ ಯೋಜನೆಯ ರೂವಾರಿ ಪ್ರೊ.ರೇಣುಕಾ ಪ್ರಸಾದ್ ಹೇಳಿದರು.