‘ಗಜೇಂದ್ರ ಅವರಿಂದಲೇ ಕೆಲಸ ಹೋಯಿತೆಂದು ತಿಳಿದಿದ್ದ ಸಂತೋಷ್, ಕೊಲೆ ಮಾಡಲು ಸಂಚು ರೂಪಿಸಿದ್ದ. ಗಜೇಂದ್ರ ಅವರ ಮನೆಗೆ ಹೋಗಿದ್ದ ಆರೋಪಿ, ಅವರನ್ನು ಕರೆದುಕೊಂಡು ಬಾರ್ಗೆ ತೆರಳಿದ್ದ. ಇಬ್ಬರು ಸೇರಿ ಮದ್ಯ ಕುಡಿದಿದ್ದರು. ನಂತರ, ಅವರಿಬ್ಬರು ಬಾರ್ನಿಂದ ಹೊರಗೆ ಬಂದಿದ್ದರು. ಜಗಳ ತೆಗೆದಿದ್ದ ಸಂತೋಷ್, ಗಜೇಂದ್ರ ಮೇಲೆ ಹಲ್ಲೆ ಮಾಡಿ ತಳ್ಳಿದ್ದ. ನಂತರ, ತಲೆ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿದ್ದ. ತೀವ್ರ ಗಾಯಗೊಂಡು ಗಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.