ವರದಿ ಸಲ್ಲಿಸಲು ಸೂಚನೆ: ಈ 38 ಅಧಿಕಾರಿಗಳು, ನೌಕರರು ಎರಡು ತಿಂಗಳ ಅವಧಿಯಲ್ಲಿ ವಿಲೇವಾರಿ ಮಾಡಿರುವ ಕಡತಗಳು, ಅರ್ಜಿಗಳು, ಸ್ಥಳ ತಪಾಸಣೆ ಸೇರಿದಂತೆ ಅವರ ಕೆಲಸದ ಕುರಿತು ವರದಿ ಸಲ್ಲಿಸುವಂತೆ ತಹಶೀಲ್ದಾರ್ಗೆ ಸೂಚನೆ ನೀಡಲಾಗಿದೆ. ಕಡತಗಳನ್ನು ಬಾಕಿ ಇರಿಸಿಕೊಂಡಿರುವ ಕುರಿತೂ ಸಂಬಂಧಿಸಿದ ಅಧಿಕಾರಿ, ನೌಕರರು ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.