ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಎಂ. ಲಕ್ಷ್ಮೀಶ ಮಾತನಾಡಿ, ‘ಕರಗದ ಸಂಪ್ರದಾಯವನ್ನು 1,200 ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಹಾಭಾರತದ ಹಿನ್ನೆಲೆ ಹೊಂದಿರುವ ತಿಗಳ ಕ್ಷತ್ರೀಯ ಸಮುದಾಯ ಈ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದೆ. ಮೈಸೂರಿನ ದಸರಾ ಉತ್ಸವಕ್ಕೆ ನೀಡಿರುವ ಭೌಗೋಳಿಕ ವೈಶಿಷ್ಟ್ಯದ ಸ್ಥಾನಮಾನ ಕರಗ ಉತ್ಸವಕ್ಕೂ ಸಿಗಬೇಕು’ ಎಂದು ಒತ್ತಾಯಿಸಿದರು.