ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಿದ್ದ ಜಮೀರ್ ಅಹಮ್ಮದ್ ಅವರನ್ನು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ದರಿದ್ರ ನಾರಾಯಣ ರ್ಯಾಲಿ ಮೂಲಕ ಗೆಲ್ಲಿಸಿ ತಂದಿದ್ದರು. ಈಗ ಜೆಡಿಎಸ್ ನಾಯಕರ ವಿರುದ್ಧವೇ ಕೀಳಾಗಿ ಮಾತನಾಡುತ್ತಿದ್ದಾರೆ’ ಎಂದು ದೂರಿದರು.