‘14ನೇ ಹಣಕಾಸು, ಬೀದಿ ದೀಪಗಳ ಖರೀದಿ, ತೆರಿಗೆ ಪರಿಷ್ಕರಣೆ, ಇ-ಖಾತೆ, ಡಿಸಿ ಬಿಲ್ ಇತ್ಯಾದಿ ಪಂಚಾಯಿತಿಗೆ ಸೇರಿದ ಅನುದಾನ ಬಳಕೆ, ಕಾಮಗಾರಿ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಕ್ರಮ ಎಸಗಿದ್ದಾರೆಂಬ ದೂರುಗಳು ಸಾಕಷ್ಟು ಬಂದಿದ್ದವು. ಆ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ಅಂತಹ ಅಕ್ರಮಗಳು ಕಂಡು ಬಂದಿಲ್ಲ. ಮುಂದೆ ಅಧಿಕಾರಿಗಳ ಸಮೇತ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಾರ್ವಜನಿಕರು ಇನ್ನಷ್ಟು ಸಮರ್ಪಕ ದಾಖಲೆ ಕೊಟ್ಟರೆ ಮೇಲಧಿಕಾರಿಗಳಿಂದ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಯಮ್ಮ ಹೇಳಿದರು.