<p><strong>ಬೆಂಗಳೂರು:</strong> ಅಕ್ರಮ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ ಅವುಗಳ ಮೇಲೆ ಇದುವರೆಗೆ ಪೂರ್ಣವಾಗಿ ನಿಷೇಧ ವಿಧಿಸಲು ಸಾಧ್ಯವಾಗಿಲ್ಲ. `ಈ ಸಂಬಂಧ ಬಿಬಿಎಂಪಿ ರೂಪಿಸಿದ ನಿಯಮಾವಳಿಗೆ ರಾಜ್ಯ ಸರ್ಕಾರದ ಒಪ್ಪಿಗೆ ದೊರೆಯದಿರುವುದೇ ಇದಕ್ಕೆ ಕಾರಣವಾಗಿದೆ' ಎಂದು ಅಧಿಕಾರಿಗಳು ಹೇಳುತ್ತಾರೆ.<br /> <br /> `ರಾಜ್ಯ ಸರ್ಕಾರದ ಬೆಂಬಲ ಇಲ್ಲದೆ ಅಕ್ರಮ ಜಾಹೀರಾತು ಫಲಕಗಳ ಮೇಲೆ ಸಂಪೂರ್ಣ ನಿಷೇಧ ಕಷ್ಟದ ಕೆಲಸ. ದೊಡ್ಡ ರಾಜಕೀಯ ಲಾಬಿಯೇ ಇದರ ಹಿಂದಿದೆ . ಫಲಕ ತೆರವುಗೊಳಿಸುವ ಬಿಬಿಎಂಪಿ ಸಿಬ್ಬಂದಿಗೆ ಕೊಲೆ ಬೆದರಿಕೆ ಬಂದ ಘಟನೆಗಳು ನಡೆದಿವೆ' ಎಂದರು.<br /> `ಚೆನ್ನೈ ಹಾಗೂ ನವದೆಹಲಿ ಮಾದರಿಯಲ್ಲೇ ಅಕ್ರಮ ಜಾಹೀರಾತು ಫಲಕ ನಿಷೇಧಕ್ಕೆ ಬಿಬಿಎಂಪಿ ಕೂಡ ನಿಯಮಾವಳಿ ಸಿದ್ಧಪಡಿಸಿದೆ.<br /> <br /> ಆದರೆ, ರಾಜಕೀಯ ಲಾಬಿಯಿಂದ ಅದಕ್ಕೆ ಇದುವರೆಗೆ ಅನುಮತಿ ಸಿಕ್ಕಿಲ್ಲ. ಕಳೆದ ಎರಡು ತಿಂಗಳಲ್ಲಿ 2,500ಕ್ಕೂ ಅಧಿಕ ಫಲಕ ತೆರವುಗೊಳಿಸಿದ್ದೇವೆ. ಆದರೆ, ರಾಜಕೀಯ ಬೆಂಬಲದಿಂದ ಅವುಗಳನ್ನು ಮತ್ತೆ ಅಳವಡಿಸಲಾಗಿದೆ' ಎಂದು ವಾಸ್ತವಾಂಶವನ್ನು ಬಿಚ್ಚಿಡುತ್ತಾರೆ. `ಅಕ್ರಮ ಫಲಕಗಳ ಮೇಲೆ ನಿಗಾ ಇಡಲು 2007ರಲ್ಲಿಯೇ ಪ್ರತಿಯೊಂದು ವಲಯದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಅವುಗಳು ಯಾವುವೂ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿಲ್ಲ ಎಂದು ದೂರುತ್ತಾರೆ.<br /> <br /> ಭೌಗೋಳಿಕ ಮಾಹಿತಿ ವ್ಯವಸ್ಥೆ ಮೂಲಕ ಆಯಾ ಪ್ರದೇಶದಲ್ಲಿ ಇರುವ ಜಾಹೀರಾತು ಫಲಕಗಳು ಮತ್ತು ನೋಂದಣಿಯಾದ ಫಲಕಗಳನ್ನು ತುಲನೆ ಮಾಡಿ, ಅಕ್ರಮ ಪತ್ತೆ ಹಚ್ಚುವ ಹೊಸ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಲು ಉದ್ದೇಶಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,594 ನೋಂದಣಿಯಾದ ಫಲಕಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಕ್ರಮ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ ಅವುಗಳ ಮೇಲೆ ಇದುವರೆಗೆ ಪೂರ್ಣವಾಗಿ ನಿಷೇಧ ವಿಧಿಸಲು ಸಾಧ್ಯವಾಗಿಲ್ಲ. `ಈ ಸಂಬಂಧ ಬಿಬಿಎಂಪಿ ರೂಪಿಸಿದ ನಿಯಮಾವಳಿಗೆ ರಾಜ್ಯ ಸರ್ಕಾರದ ಒಪ್ಪಿಗೆ ದೊರೆಯದಿರುವುದೇ ಇದಕ್ಕೆ ಕಾರಣವಾಗಿದೆ' ಎಂದು ಅಧಿಕಾರಿಗಳು ಹೇಳುತ್ತಾರೆ.<br /> <br /> `ರಾಜ್ಯ ಸರ್ಕಾರದ ಬೆಂಬಲ ಇಲ್ಲದೆ ಅಕ್ರಮ ಜಾಹೀರಾತು ಫಲಕಗಳ ಮೇಲೆ ಸಂಪೂರ್ಣ ನಿಷೇಧ ಕಷ್ಟದ ಕೆಲಸ. ದೊಡ್ಡ ರಾಜಕೀಯ ಲಾಬಿಯೇ ಇದರ ಹಿಂದಿದೆ . ಫಲಕ ತೆರವುಗೊಳಿಸುವ ಬಿಬಿಎಂಪಿ ಸಿಬ್ಬಂದಿಗೆ ಕೊಲೆ ಬೆದರಿಕೆ ಬಂದ ಘಟನೆಗಳು ನಡೆದಿವೆ' ಎಂದರು.<br /> `ಚೆನ್ನೈ ಹಾಗೂ ನವದೆಹಲಿ ಮಾದರಿಯಲ್ಲೇ ಅಕ್ರಮ ಜಾಹೀರಾತು ಫಲಕ ನಿಷೇಧಕ್ಕೆ ಬಿಬಿಎಂಪಿ ಕೂಡ ನಿಯಮಾವಳಿ ಸಿದ್ಧಪಡಿಸಿದೆ.<br /> <br /> ಆದರೆ, ರಾಜಕೀಯ ಲಾಬಿಯಿಂದ ಅದಕ್ಕೆ ಇದುವರೆಗೆ ಅನುಮತಿ ಸಿಕ್ಕಿಲ್ಲ. ಕಳೆದ ಎರಡು ತಿಂಗಳಲ್ಲಿ 2,500ಕ್ಕೂ ಅಧಿಕ ಫಲಕ ತೆರವುಗೊಳಿಸಿದ್ದೇವೆ. ಆದರೆ, ರಾಜಕೀಯ ಬೆಂಬಲದಿಂದ ಅವುಗಳನ್ನು ಮತ್ತೆ ಅಳವಡಿಸಲಾಗಿದೆ' ಎಂದು ವಾಸ್ತವಾಂಶವನ್ನು ಬಿಚ್ಚಿಡುತ್ತಾರೆ. `ಅಕ್ರಮ ಫಲಕಗಳ ಮೇಲೆ ನಿಗಾ ಇಡಲು 2007ರಲ್ಲಿಯೇ ಪ್ರತಿಯೊಂದು ವಲಯದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಅವುಗಳು ಯಾವುವೂ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿಲ್ಲ ಎಂದು ದೂರುತ್ತಾರೆ.<br /> <br /> ಭೌಗೋಳಿಕ ಮಾಹಿತಿ ವ್ಯವಸ್ಥೆ ಮೂಲಕ ಆಯಾ ಪ್ರದೇಶದಲ್ಲಿ ಇರುವ ಜಾಹೀರಾತು ಫಲಕಗಳು ಮತ್ತು ನೋಂದಣಿಯಾದ ಫಲಕಗಳನ್ನು ತುಲನೆ ಮಾಡಿ, ಅಕ್ರಮ ಪತ್ತೆ ಹಚ್ಚುವ ಹೊಸ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಲು ಉದ್ದೇಶಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,594 ನೋಂದಣಿಯಾದ ಫಲಕಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>