ಕೆಂಗೇರಿ: ಸಾರ್ವಜನಿಕ ಕೊಂದು ಕೊರತೆಗಳನ್ನು ಜನ ಪ್ರತಿನಿಧಿಗಳಿಗೆ ನೇರವಾಗಿ ಗಮನಕ್ಕೆ ತರುವ ಉದ್ದೇಶದಿಂದ ಮಲ್ಲತ್ತಹಳ್ಳಿ ಬಾಲಗಂಗಾಧರ ನಗರದಲ್ಲಿ `ಯುವ ಅಲೆ~ ಎಂಬ ಸಂಸ್ಥೆಯನ್ನು ರಾಜರಾಜೇಶ್ವರಿ ನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, `ಸಂಸ್ಥೆಯ ಉದ್ದೇಶ ಉತ್ತಮವಾಗಿದೆ. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಎದುರಾಗುವ ಅಡೆ ತಡೆಗಳನ್ನು ಸಹಿಸಿಕೊಂಡು ಬೆಳೆಯಬೇಕು~ ಎಂದರು. ಪಾಲಿಕೆ ಸದಸ್ಯ ಗೋವಿಂದರಾಜು, ಕಾಂಗ್ರೆಸ್ನ ಯುವ ಮುಖಂಡ ನಟರಾಜುಗೌಡ, ಮುಖಂಡ ಕಾಳೇಗೌಡ, ಸಂಸ್ಥೆಯ ಮೋಹನ್ ಗೌಡ, ಅನಿಲ್ ಕುಮಾರ್ ಇತರರು ಹಾಜರಿದ್ದರು.