‘ಇಂದಿರಾ ವಿವಾದಾತ್ಮಕ ವ್ಯಕ್ತಿ. ತುರ್ತುಪರಿಸ್ಥಿತಿ ಘೋಷಣೆ ಸೇರಿದಂತೆ ಕೆಲ ನಿರ್ಧಾರಗಳ ಮೂಲಕ ಟೀಕೆಗೂ ಗುರಿಯಾಗಿದ್ದರು. ತಾಜ್ಮಹಲ್ನಿಂದ 40 ಕಿ.ಮೀ. ದೂರದಲ್ಲಿ ಪೆಟ್ರೋಲಿಯಂ ಸಂಸ್ಕರಣೆ ಮಾಡಲು ಹಾಗೂ ಕರ್ನಾಟಕ ಕುದುರೆಮುಖದಲ್ಲಿ ಕಬ್ಬಿಣದ ಅದಿರು ತೆಗೆಯಲು ಅನುಮತಿ ನೀಡಿದ್ದರು. ಇದಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ದೇಶದ ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಕಾರಣದಿಂದ ಕುದುರೆಮುಖ ಯೋಜನೆಗೆ ಅನುಮತಿ ನೀಡಿದ್ದರೇ ಹೊರತು, ಸ್ವಇಚ್ಛೆಯಿಂದ ತೆಗೆದುಕೊಂಡ ನಿರ್ಧಾರವಲ್ಲ’ ಎಂದು ಸ್ಪಷ್ಟಪಡಿಸಿದರು.