ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಮೂರು ದಿನಗಳ ‘ವಿಶೇಷ ಅನುಮತಿ’ ನೀಡಲು ನಿರ್ಧರಿಸಿದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನ.26ರಂದು ಸಂಘಟಕರಿಗೆ ಪತ್ರ ಬರೆದಿದ್ದರು. ಆದರೆ, ಮೂರು ದಿನಗಳ ಉತ್ಸವ ನಡೆಸುವ ಬದಲು ಈ ಬಾರಿ ಪುಸ್ತಕೋತ್ಸವ ನಡೆಸದಿರುವುದೇ ಸರಿಯೆಂದು ಸಂಘಟಕರು ನಿರ್ಧರಿಸಿದ್ದಾರೆ.
‘ಮೂರು ದಿನ ಉತ್ಸವ ನಡೆಸುವುದು ಉಚಿತವಲ್ಲವೆಂದು ಉತ್ಸವ ರದ್ದುಗೊಳಿಸಲಾಗಿದೆ. ವಾಣಿಜ್ಯ ಉದ್ದೇಶದ ಕಾರ್ಯಕ್ರಮ ನಡೆಸಲು ಅರಮನೆ ಮೈದಾನದಲ್ಲಿ ಅವಕಾಶ ನೀಡುವುದಿಲ್ಲ ಎಂದಾದರೆ ಇಡೀ ವರ್ಷ ‘ಫನ್ ವರ್ಲ್ಡ್’, ‘ಸ್ನೋ ಸಿಟಿ’ ನಡೆಸಲು ಅನುಮತಿ ನೀಡಿರುವುದು ಯಾವ ಆಧಾರ ಮೇಲೆ’ ಎಂದು ಬೆಂಗಳೂರು ಪುಸ್ತಕೋತ್ಸವ ಸಮಿತಿ ಕಾರ್ಯದರ್ಶಿ ದೇವರು ಭಟ್ ಪ್ರಶ್ನಿಸಿದ್ದಾರೆ.