‘ಪ್ರಜಾವಾಣಿ’ ಜತೆ ಮಾತನಾಡಿದ ಮಧ್ವಾಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟಿ ನಾಗೇಶ್, ‘ಬಾಗಿಲಿಗೆ ಮೂರು ಬೀಗಗಳನ್ನು ಹಾಕಿದ್ದೆವು. ರಾತ್ರಿ 11 ಗಂಟೆ ನಂತರ ದೇವಸ್ಥಾನದ ಬಳಿ ಬಂದಿರುವ ಕಳ್ಳರು, ಆ ಬೀಗಗಳನ್ನು ಒಡೆದು ಒಳನುಗ್ಗಿದ್ದಾರೆ. ಹುಂಡಿ ಬೀಗ ಮುರಿಯಲು ಸಾಧ್ಯವಾಗದೆ, ಕಾಣಿಕೆ ಹಾಕಲು ಇರುವ ಜಾಗವನ್ನು ಹಾರೆಯಿಂದ ಅಗಲ ಮಾಡಿ, ಕೈಗೆ ಸಿಕ್ಕಷ್ಟು ಹಣ ತೆಗೆದುಕೊಂಡು ಹೊರಟು ಹೋಗಿದ್ದಾರೆ’ ಎಂದು ಹೇಳಿದರು.