<p><strong>ಬೆಂಗಳೂರು: </strong>‘ಹವ್ಯಕ ದಂಪತಿ ಒಂದೇ ಮಗು ಸಾಕು ಎಂಬ ಧೋರಣೆಯನ್ನು ಹೊಂದುವುದು ಸರಿಯಲ್ಲ. ಇದರಿಂದ ಕಾಲಕ್ರಮೇಣ ಹವ್ಯಕ ಸಮುದಾಯವೇ ನಶಿಸಿಹೋಗುವ ಸಾಧ್ಯತೆ ಇದೆ' ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.</p>.<p>ಹವ್ಯಕ ಮಹಾಸಭಾ ವತಿಯಿಂದ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಹವ್ಯಕರಲ್ಲಿ ಅಂತರ್ಜಾತಿ ವಿವಾಹ ಹೆಚ್ಚುತ್ತಿದ್ದು, ಇದು ಕುಟುಂಬ ವಿಘಟನೆಗೂ ಕಾರಣವಾಗುತ್ತಿದೆ. ಇವನ್ನೆಲ್ಲ ಹತೋಟಿಗೆ ತರಬೇಕಾದ್ದದ್ದು ಸಂಘಟನೆಗಳ ಕರ್ತವ್ಯ. ಈ ಬಗ್ಗೆ ಮಹಾಸಭಾ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಹವ್ಯಕರ ಮನೆಗಳಲ್ಲಿ ಪಂಚ ಯಜ್ಞಗಳು ನಡೆಯುತ್ತಿದ್ದವು. ಈಗ ಪೂಜೆ ಮತ್ತು ಸಂಧ್ಯೋಪಾಸನೆಯಷ್ಟೇ ಉಳಿದಿದೆ. ಕನಿಷ್ಠಪಕ್ಷ ಗೀತಾಧ್ಯಯನ ಮತ್ತು ಪ್ರಾಣಾಯಾಮವನ್ನಾದರೂ ತಪಸ್ಸಿನಂತೆ ಮಾಡಬೇಕು. ಹವ್ಯಕ ಮಹಾಸಭಾದಲ್ಲಿ ಗೀತಾ ಪಾರಾಯಣವನ್ನು ನಿರಂತರವಾಗಿ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕಮಂಡಲವನ್ನು ಪ್ರತಿದಿನ ತೊಳೆಯದಿದ್ದರೆ ಒಳಗೆ ಪಾಚಿ ಕಟ್ಟುತ್ತದೆ. ಮನಸ್ಸು ಕೂಡಾ ಹಾಗೆಯೇ. ಅದನ್ನು ಉತ್ತಮ ಸಂಸ್ಕಾರಗಳ ಮೂಲಕ ಸ್ವಚ್ಛಗೊಳಿಸುತ್ತಿರಬೇಕು’ ಎಂದರು.</p>.<p>ಮಹಾಸಭಾ ಕೈಗೊಂಡಿರುವ ಸಸ್ಯ ಮತ್ತು ಗೀತೆ ರಕ್ಷಣೆ ಅಭಿಯಾನ ಹಾಗೂ ಹವ್ಯಕ ವಿಶ್ವಸಮ್ಮೇಳನ ಕುರಿತು ಅಧ್ಯಕ್ಷ ಡಾ.ಗಿರಿಧರ್ ಕಜೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಹವ್ಯಕ ದಂಪತಿ ಒಂದೇ ಮಗು ಸಾಕು ಎಂಬ ಧೋರಣೆಯನ್ನು ಹೊಂದುವುದು ಸರಿಯಲ್ಲ. ಇದರಿಂದ ಕಾಲಕ್ರಮೇಣ ಹವ್ಯಕ ಸಮುದಾಯವೇ ನಶಿಸಿಹೋಗುವ ಸಾಧ್ಯತೆ ಇದೆ' ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.</p>.<p>ಹವ್ಯಕ ಮಹಾಸಭಾ ವತಿಯಿಂದ ಮಲ್ಲೇಶ್ವರದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಹವ್ಯಕರಲ್ಲಿ ಅಂತರ್ಜಾತಿ ವಿವಾಹ ಹೆಚ್ಚುತ್ತಿದ್ದು, ಇದು ಕುಟುಂಬ ವಿಘಟನೆಗೂ ಕಾರಣವಾಗುತ್ತಿದೆ. ಇವನ್ನೆಲ್ಲ ಹತೋಟಿಗೆ ತರಬೇಕಾದ್ದದ್ದು ಸಂಘಟನೆಗಳ ಕರ್ತವ್ಯ. ಈ ಬಗ್ಗೆ ಮಹಾಸಭಾ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಹವ್ಯಕರ ಮನೆಗಳಲ್ಲಿ ಪಂಚ ಯಜ್ಞಗಳು ನಡೆಯುತ್ತಿದ್ದವು. ಈಗ ಪೂಜೆ ಮತ್ತು ಸಂಧ್ಯೋಪಾಸನೆಯಷ್ಟೇ ಉಳಿದಿದೆ. ಕನಿಷ್ಠಪಕ್ಷ ಗೀತಾಧ್ಯಯನ ಮತ್ತು ಪ್ರಾಣಾಯಾಮವನ್ನಾದರೂ ತಪಸ್ಸಿನಂತೆ ಮಾಡಬೇಕು. ಹವ್ಯಕ ಮಹಾಸಭಾದಲ್ಲಿ ಗೀತಾ ಪಾರಾಯಣವನ್ನು ನಿರಂತರವಾಗಿ ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕಮಂಡಲವನ್ನು ಪ್ರತಿದಿನ ತೊಳೆಯದಿದ್ದರೆ ಒಳಗೆ ಪಾಚಿ ಕಟ್ಟುತ್ತದೆ. ಮನಸ್ಸು ಕೂಡಾ ಹಾಗೆಯೇ. ಅದನ್ನು ಉತ್ತಮ ಸಂಸ್ಕಾರಗಳ ಮೂಲಕ ಸ್ವಚ್ಛಗೊಳಿಸುತ್ತಿರಬೇಕು’ ಎಂದರು.</p>.<p>ಮಹಾಸಭಾ ಕೈಗೊಂಡಿರುವ ಸಸ್ಯ ಮತ್ತು ಗೀತೆ ರಕ್ಷಣೆ ಅಭಿಯಾನ ಹಾಗೂ ಹವ್ಯಕ ವಿಶ್ವಸಮ್ಮೇಳನ ಕುರಿತು ಅಧ್ಯಕ್ಷ ಡಾ.ಗಿರಿಧರ್ ಕಜೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>