ಬಿಬಿಎಂಪಿಯ ಸಹಾಯಕ ಎಂಜಿನಿಯರ್ ವನರಾಜು ಪ್ರತಿಕ್ರಿಯಿಸಿ, ‘ಇದು ಮಳೆನೀರು ಕಾಲುವೆ ನಿರ್ವಹಣೆ ವಿಭಾ
ಗದ ಎಂಜಿನಿಯರ್ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರಮುಖೇನ ಗಮನಕ್ಕೆ ತರಲಾಗಿದೆ. ಆದರೆ, ಅವರು ಗಮನ ಹರಿಸಿಲ್ಲ’ ಎಂದರು. ‘ಒಂದು ತಿಂಗಳಿನಿಂದ ಕಲ್ಲುಗಳು ಕುಸಿದು ಬಿದ್ದಿವೆ. ಮಕ್ಕಳು ಇಲ್ಲಿಯೇ ಆಟವಾಡುತ್ತಾರೆ. ಅನಾಹುತ ಸಂಭವಿಸಿ
ದರೆ ಯಾರು ಹೊಣೆ’ ಎಂದು ಸ್ಥಳೀಯ ನಿವಾಸಿ ರವಿ ಪ್ರಶ್ನಿಸಿದರು. ಮಳೆನೀರು ಕಾಲುವೆ ನಿರ್ವಹಣೆಯ ಎಂಜಿನಿಯರ್ ತಮ್ಮಯ್ಯ ಕರೆ
ಸ್ವೀಕರಿಸಲಿಲ್ಲ.