<p><strong>ಬೆಂಗಳೂರು: </strong>ಕನಕಪುರ ರಸ್ತೆ ಬಳಿಯ ಗಂಗಾಧರನ ಗುಡ್ಡೆಯಲ್ಲಿ ಹೊಲದಲ್ಲಿದ್ದ 9 ತಿಂಗಳ ಕರಡಿ ಮರಿಯನ್ನು ವನ್ಯಜೀವಿ ಸಂರಕ್ಷಣಾ ತಂಡದವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.</p>.<p>ಹೊಲದ ನಡುವೆ ಕರಡಿಯ ಮರಿ ಇರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಲಯ ಅರಣ್ಯ ಅಧಿಕಾರಿ ದಿನೇಶ್ ಗೌಡ ಅವರು ಈ ಬಗ್ಗೆ ಬನ್ನೇರುಘಟ್ಟ ಕರಡಿಧಾಮಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ಕರಡಿ ಮರಿಯನ್ನು ವಶಕ್ಕೆ ಪಡೆದ ಕರಡಿಧಾಮದ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ನೀಡಿದರು.</p>.<p>‘ಕರಡಿ ಮರಿಯ ಚಲನವಲನದ ಬಗ್ಗೆ ಕೆಲವು ಗಂಟೆ ನಿಗಾ ವಹಿಸಿದ್ದೆವು. ಬಳಿಕ ಅದನ್ನು ಸಮೀಪದ ಕಾಡಿಗೆ ಬಿಟ್ಟಿದ್ದೇವೆ’ ಎಂದು ವನ್ಯಜೀವಿ ಸಂರಕ್ಷಕ ಹಾಗೂ ವನ್ಯಜೀವಿ ಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ಅರುಣ್ ಎ. ಷಾ ತಿಳಿಸಿದ್ದಾರೆ.</p>.<p>‘ಕಳ್ಳ ಬೇಟೆ ಹಾಗೂ ನೆಲೆಗಳ ನಾಶದಿಂದಾಗಿ ಕರಡಿ ಸಂತತಿ ಅಪಾಯಕ್ಕೆ ಸಿಲುಕಿದೆ. ಅಪಾಯದ ಅಂಚಿನಲ್ಲಿರುವ ವನ್ಯಜೀವಿಗಳ ಕುರಿತು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್) ಸಿದ್ಧಪಡಿಸಿರುವ ಕೆಂಪು ಪಟ್ಟಿಯಲ್ಲಿ ಕರಡಿ ಕೂಡಾ ಸ್ಥಾನ ಪಡೆದಿದೆ’ ಎಂದು ಅವರು ತಿಳಿಸಿದರು.</p>.<p>ಮೂರು ತಿಂಗಳ ಹಿಂದೆ ಕೊರಟೆಗೆರೆ ಬಳಿ ತಂತಿ ಬೇಲಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ವನ್ಯಜೀವಿ ಸಂರಕ್ಷಕರ ತಂಡ ರಕ್ಷಣೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನಕಪುರ ರಸ್ತೆ ಬಳಿಯ ಗಂಗಾಧರನ ಗುಡ್ಡೆಯಲ್ಲಿ ಹೊಲದಲ್ಲಿದ್ದ 9 ತಿಂಗಳ ಕರಡಿ ಮರಿಯನ್ನು ವನ್ಯಜೀವಿ ಸಂರಕ್ಷಣಾ ತಂಡದವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.</p>.<p>ಹೊಲದ ನಡುವೆ ಕರಡಿಯ ಮರಿ ಇರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಲಯ ಅರಣ್ಯ ಅಧಿಕಾರಿ ದಿನೇಶ್ ಗೌಡ ಅವರು ಈ ಬಗ್ಗೆ ಬನ್ನೇರುಘಟ್ಟ ಕರಡಿಧಾಮಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ಕರಡಿ ಮರಿಯನ್ನು ವಶಕ್ಕೆ ಪಡೆದ ಕರಡಿಧಾಮದ ಅಧಿಕಾರಿಗಳು ಅದಕ್ಕೆ ಚಿಕಿತ್ಸೆ ನೀಡಿದರು.</p>.<p>‘ಕರಡಿ ಮರಿಯ ಚಲನವಲನದ ಬಗ್ಗೆ ಕೆಲವು ಗಂಟೆ ನಿಗಾ ವಹಿಸಿದ್ದೆವು. ಬಳಿಕ ಅದನ್ನು ಸಮೀಪದ ಕಾಡಿಗೆ ಬಿಟ್ಟಿದ್ದೇವೆ’ ಎಂದು ವನ್ಯಜೀವಿ ಸಂರಕ್ಷಕ ಹಾಗೂ ವನ್ಯಜೀವಿ ಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ಅರುಣ್ ಎ. ಷಾ ತಿಳಿಸಿದ್ದಾರೆ.</p>.<p>‘ಕಳ್ಳ ಬೇಟೆ ಹಾಗೂ ನೆಲೆಗಳ ನಾಶದಿಂದಾಗಿ ಕರಡಿ ಸಂತತಿ ಅಪಾಯಕ್ಕೆ ಸಿಲುಕಿದೆ. ಅಪಾಯದ ಅಂಚಿನಲ್ಲಿರುವ ವನ್ಯಜೀವಿಗಳ ಕುರಿತು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್) ಸಿದ್ಧಪಡಿಸಿರುವ ಕೆಂಪು ಪಟ್ಟಿಯಲ್ಲಿ ಕರಡಿ ಕೂಡಾ ಸ್ಥಾನ ಪಡೆದಿದೆ’ ಎಂದು ಅವರು ತಿಳಿಸಿದರು.</p>.<p>ಮೂರು ತಿಂಗಳ ಹಿಂದೆ ಕೊರಟೆಗೆರೆ ಬಳಿ ತಂತಿ ಬೇಲಿಯಲ್ಲಿ ಸಿಲುಕಿ ಗಾಯಗೊಂಡಿದ್ದ ಕರಡಿಯನ್ನು ವನ್ಯಜೀವಿ ಸಂರಕ್ಷಕರ ತಂಡ ರಕ್ಷಣೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>