<p><strong>ಬೆಂಗಳೂರು:</strong> ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಗುರುತ್ವ ಮಸೂರ ಪ್ರಯೋಗಕ್ಕೆ (ಗ್ರಾವಿಟೇಷನಲ್ ಲೆನ್ಸಿಂಗ್) ಬುಧವಾರ ನೂರು ವರ್ಷ ತುಂಬಿತು. ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು.</p>.<p>ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸ್ನ (ಐಸಿಟಿಎಸ್) ಹಿರಿಯ ಪ್ರಾಧ್ಯಾಪಕ ಪರಮೇಶ್ವರನ್ ಅಜಿತ್ ಅವರು ಸಾಪೇಕ್ಷ ಸಿದ್ಧಾಂತದ ಕುರಿತು ಉಪನ್ಯಾಸ ನೀಡಿದರು.</p>.<p>‘1919ರಲ್ಲಿಐನ್ಸ್ಟೀನ್ ಅವರ ಈ ಪ್ರಯೋಗ ಪರೀಕ್ಷೆಗೆ ಒಳಪಟ್ಟಿತು.ನಕ್ಷತ್ರಗಳ ಬೆಳಕಿನ ಕಿರಣಗಳು ಬಲಿಷ್ಠವಾದ ಗುರುತ್ವದಲ್ಲಿ ಹಾದುಹೋಗುವ ಬಾಗುತ್ತವೆ ಎಂಬುದನ್ನು ಪ್ರಯೋಗ ಸಾಬೀತುಪಡಿಸಿತ್ತು. ಆದರೆ, ವಿಜ್ಞಾನಿಗಳು ಸೇರಿದಂತೆ ಅನೇಕರಿಗೆ ಈ ಸಿದ್ಧಾಂತ ಅರ್ಥವೇ ಆಗಿರಲಿಲ್ಲ’ ಎಂದು ಅಜಿತ್ ತಿಳಿಸಿದರು.</p>.<p>‘ವಿಜ್ಞಾನಿ ಆರ್ಥರ್ ಎಡ್ಡಿಂಗ್ಟನ್ ಅವರು ಗೊಂದಲದಲ್ಲಿದ್ದ ವಿಜ್ಞಾನಿಗಳಿಗೆ ಸಿದ್ಧಾಂತವನ್ನು ಮನದಟ್ಟು ಮಾಡುವ ಸಲುವಾಗಿ ಈ ಪ್ರಯೋಗವನ್ನು ಮತ್ತೊಮ್ಮೆ ನಿರೂಪಿಸಿದರು. ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಸೂರ್ಯನ ಹಿಂಭಾಗದ ನಕ್ಷತ್ರಗಳ ಬೆಳಕು ಬಾಗುವುದನ್ನು ಅವರು ಜಗತ್ತಿನ ಮುಂದೆ ಚಿತ್ರಗಳ ಸಹಿತ ನಿರೂಪಿಸಿದ್ದರು.ಆಗ ಎಲ್ಲರಿಗೂ ಅರ್ಥವಾಯಿತು. ಅದೇ ರೀತಿ ತರಂಗಗಳೂ ಬಾಗುತ್ತವೆ ಎಂಬುದನ್ನೂ ಅವರು ತಿಳಿಸಿದ್ದರು’ ಎಂದು ಹೇಳಿದರು.</p>.<p>‘ಎಡ್ಡಿಂಗ್ಟನ್ ಈ ಸಿದ್ಧಾಂತವನ್ನು ನಿರೂಪಿಸಿದ ಸುದ್ದಿ ಕೊಲ್ಕತ್ತದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ವಿಜ್ಞಾನಿಗಳು ಅವರನ್ನು ಎರಡನೇ ಐನ್ಸ್ಟೀನ್ ಎಂದೇ ಕರೆದರು. ಈ ಸಿದ್ಧಾಂತದ ಆಧಾರದಲ್ಲೇ ಜಿಪಿಎಸ್ ಮೂಲಕ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭೌತವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಗುರುತ್ವ ಮಸೂರ ಪ್ರಯೋಗಕ್ಕೆ (ಗ್ರಾವಿಟೇಷನಲ್ ಲೆನ್ಸಿಂಗ್) ಬುಧವಾರ ನೂರು ವರ್ಷ ತುಂಬಿತು. ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು.</p>.<p>ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸ್ನ (ಐಸಿಟಿಎಸ್) ಹಿರಿಯ ಪ್ರಾಧ್ಯಾಪಕ ಪರಮೇಶ್ವರನ್ ಅಜಿತ್ ಅವರು ಸಾಪೇಕ್ಷ ಸಿದ್ಧಾಂತದ ಕುರಿತು ಉಪನ್ಯಾಸ ನೀಡಿದರು.</p>.<p>‘1919ರಲ್ಲಿಐನ್ಸ್ಟೀನ್ ಅವರ ಈ ಪ್ರಯೋಗ ಪರೀಕ್ಷೆಗೆ ಒಳಪಟ್ಟಿತು.ನಕ್ಷತ್ರಗಳ ಬೆಳಕಿನ ಕಿರಣಗಳು ಬಲಿಷ್ಠವಾದ ಗುರುತ್ವದಲ್ಲಿ ಹಾದುಹೋಗುವ ಬಾಗುತ್ತವೆ ಎಂಬುದನ್ನು ಪ್ರಯೋಗ ಸಾಬೀತುಪಡಿಸಿತ್ತು. ಆದರೆ, ವಿಜ್ಞಾನಿಗಳು ಸೇರಿದಂತೆ ಅನೇಕರಿಗೆ ಈ ಸಿದ್ಧಾಂತ ಅರ್ಥವೇ ಆಗಿರಲಿಲ್ಲ’ ಎಂದು ಅಜಿತ್ ತಿಳಿಸಿದರು.</p>.<p>‘ವಿಜ್ಞಾನಿ ಆರ್ಥರ್ ಎಡ್ಡಿಂಗ್ಟನ್ ಅವರು ಗೊಂದಲದಲ್ಲಿದ್ದ ವಿಜ್ಞಾನಿಗಳಿಗೆ ಸಿದ್ಧಾಂತವನ್ನು ಮನದಟ್ಟು ಮಾಡುವ ಸಲುವಾಗಿ ಈ ಪ್ರಯೋಗವನ್ನು ಮತ್ತೊಮ್ಮೆ ನಿರೂಪಿಸಿದರು. ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಸೂರ್ಯನ ಹಿಂಭಾಗದ ನಕ್ಷತ್ರಗಳ ಬೆಳಕು ಬಾಗುವುದನ್ನು ಅವರು ಜಗತ್ತಿನ ಮುಂದೆ ಚಿತ್ರಗಳ ಸಹಿತ ನಿರೂಪಿಸಿದ್ದರು.ಆಗ ಎಲ್ಲರಿಗೂ ಅರ್ಥವಾಯಿತು. ಅದೇ ರೀತಿ ತರಂಗಗಳೂ ಬಾಗುತ್ತವೆ ಎಂಬುದನ್ನೂ ಅವರು ತಿಳಿಸಿದ್ದರು’ ಎಂದು ಹೇಳಿದರು.</p>.<p>‘ಎಡ್ಡಿಂಗ್ಟನ್ ಈ ಸಿದ್ಧಾಂತವನ್ನು ನಿರೂಪಿಸಿದ ಸುದ್ದಿ ಕೊಲ್ಕತ್ತದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ವಿಜ್ಞಾನಿಗಳು ಅವರನ್ನು ಎರಡನೇ ಐನ್ಸ್ಟೀನ್ ಎಂದೇ ಕರೆದರು. ಈ ಸಿದ್ಧಾಂತದ ಆಧಾರದಲ್ಲೇ ಜಿಪಿಎಸ್ ಮೂಲಕ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>