<p><strong>ಬೆಂಗಳೂರು: </strong>`ತುಮಕೂರು ವಿಶ್ವವಿದ್ಯಾಲಯವು ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಪರಿಕಲ್ಪನೆಯನ್ನು ಮುರಿದು ವಿಶ್ವವಿದ್ಯಾನಿಲಯದ ಲಾಂಛನವನ್ನು ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ~ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಆರೋಪಿಸಿದ್ದಾರೆ.<br /> <br /> `ವಿಶ್ವವಿದ್ಯಾಲಯವು ವಿಶ್ವಮುಖಿಯಾಗಬೇಕೆಂಬ ಆಶಯದೊಂದಿಗೆ ಹೊಸ ಲಾಂಛನ ಹೊರತಂದಿದೆ ಎಂಬ ವಾದವೇ ಸರಿಯಲ್ಲ. ಹಿಂದಿನ ಲಾಂಛನದಲ್ಲಿ ತುಮಕೂರು ಜಿಲ್ಲೆಯ ವೈಶಿಷ್ಟ್ಯತೆಗಳನ್ನು ಪ್ರತಿಬಿಂಬಿಸುವ ಸಂಕೇತಗಳಿದ್ದವು.<br /> <br /> ಜ್ಞಾನವೇ ಅನಂತ ಎಂಬ ಘೋಷವಾಕ್ಯವು ಜ್ಞಾನವು ಎಲ್ಲಾ ಗಡಿಗಳನ್ನು ದಾಟಬೇಕು ಎಂಬ ಆಶಯವನ್ನು ಒಳಗೊಂಡಿತ್ತು. ಆದರೆ, ಹೊಸ ಲಾಂಛನದಲ್ಲಿರುವ ಧ್ಯಾನ ನಿರತ ಋಷಿ, ಆತ್ಮಜ್ಯೋತಿ ಹಾಗೂ ಸಂಸ್ಕೃತ ವಾಕ್ಯಗಳು ಪುರಾತನ ಭಾರತದ ಸಂಕುಚಿತ ಮನೋಭಾವವನ್ನೇ ಸಾರುವಂತಿವೆ. <br /> <br /> ಇವು ಆಧುನಿಕ ಪ್ರಪಂಚವು ತಿರಸ್ಕರಿಸಿದ ಪ್ರತಿಗಾಮಿ, ಜೀವ ವಿರೋಧಿ ಕೇಸರೀಕರಣದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ~ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ತುಮಕೂರು ವಿಶ್ವವಿದ್ಯಾಲಯವು ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಪರಿಕಲ್ಪನೆಯನ್ನು ಮುರಿದು ವಿಶ್ವವಿದ್ಯಾನಿಲಯದ ಲಾಂಛನವನ್ನು ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ~ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಆರೋಪಿಸಿದ್ದಾರೆ.<br /> <br /> `ವಿಶ್ವವಿದ್ಯಾಲಯವು ವಿಶ್ವಮುಖಿಯಾಗಬೇಕೆಂಬ ಆಶಯದೊಂದಿಗೆ ಹೊಸ ಲಾಂಛನ ಹೊರತಂದಿದೆ ಎಂಬ ವಾದವೇ ಸರಿಯಲ್ಲ. ಹಿಂದಿನ ಲಾಂಛನದಲ್ಲಿ ತುಮಕೂರು ಜಿಲ್ಲೆಯ ವೈಶಿಷ್ಟ್ಯತೆಗಳನ್ನು ಪ್ರತಿಬಿಂಬಿಸುವ ಸಂಕೇತಗಳಿದ್ದವು.<br /> <br /> ಜ್ಞಾನವೇ ಅನಂತ ಎಂಬ ಘೋಷವಾಕ್ಯವು ಜ್ಞಾನವು ಎಲ್ಲಾ ಗಡಿಗಳನ್ನು ದಾಟಬೇಕು ಎಂಬ ಆಶಯವನ್ನು ಒಳಗೊಂಡಿತ್ತು. ಆದರೆ, ಹೊಸ ಲಾಂಛನದಲ್ಲಿರುವ ಧ್ಯಾನ ನಿರತ ಋಷಿ, ಆತ್ಮಜ್ಯೋತಿ ಹಾಗೂ ಸಂಸ್ಕೃತ ವಾಕ್ಯಗಳು ಪುರಾತನ ಭಾರತದ ಸಂಕುಚಿತ ಮನೋಭಾವವನ್ನೇ ಸಾರುವಂತಿವೆ. <br /> <br /> ಇವು ಆಧುನಿಕ ಪ್ರಪಂಚವು ತಿರಸ್ಕರಿಸಿದ ಪ್ರತಿಗಾಮಿ, ಜೀವ ವಿರೋಧಿ ಕೇಸರೀಕರಣದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ~ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>