ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಆರ್.ಬಿ. ತಿಮ್ಮಾಪುರ,‘ಕಾಳಜಿ ಇದ್ದರೆ ಜೆಡಿಎಸ್ನವರು ದಲಿತರನ್ನು ಉಪಮುಖ್ಯಮಂತ್ರಿ ಮಾಡಲಿ’ ಎಂದು ತಿರುಗೇಟು ನೀಡಿದ್ದರು. ಈ ಬೆಳವಣಿಗೆಗಳ ಮಧ್ಯೆಯೇ ತಿಮ್ಮಾಪುರ ಅವರಿಗೆ ಒಳನಾಡು ಸಾರಿಗೆ, ಬಂದರು(ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ಇಲಾಖೆಗಳಾಗಿದ್ದು, ಸದ್ಯ ಕಾಂಗ್ರೆಸ್ಗೆ ಹಂಚಿಕೆಯಾಗಿವೆ) ಹಾಗೂ ಸಕ್ಕರೆ ಖಾತೆ ನೀಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪಟ್ಟಿ ಕಳುಹಿಸಿದ್ದರು. ಆದರೆ, ಸಕ್ಕರೆ ಖಾತೆಯನ್ನಷ್ಟೇ ಮುಖ್ಯಮಂತ್ರಿ ಹಂಚಿಕೆ ಮಾಡಿದ್ದರು. ರೇವಣ್ಣ ಚಿತಾವಣೆಯಿಂದಲೇ ಮುಖ್ಯಮಂತ್ರಿ ಈ ರೀತಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಂದರು ಖಾತೆ ಸದ್ಯ ರೇವಣ್ಣ ಸುಪರ್ದಿಗೆ ಬಂದಿದೆ.