ಬೆಂಗಳೂರು: ‘ಪ್ರಸ್ತುತ ಇರುವ ಸಮಾಜ ಅವಿವೇಕಿಗಳ ಯುಗ. ನಿಷ್ಠೆಯಿಂದ ಸೇವೆ ಸಲ್ಲಿಸುವವರನ್ನು ಕೊಲ್ಲುತ್ತಿದ್ದಾರೆ. ಮರ್ಯಾದೆ ಹತ್ಯೆ, ಹೆತ್ತ ತಂದೆ ತಾಯಿಯನ್ನೇ ಕೊಲೆ, ಕಳ್ಳತನ, ಮಗಳ ಮೇಲೆ ತಂದೆ ಅತ್ಯಾಚಾರ, ಭ್ರಷ್ಟಾಚಾರ ಹೀಗೆ ನಮ್ಮ ಸುತ್ತಮುತ್ತ ಇಂಥ ವಿದ್ಯಮಾನಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.