<p>ಬೆಂಗಳೂರು: ‘ಕ್ರಾಂತಿಕಾರಕ ಭಾಷಣ ಮಾಡಿಯೂ ಸರ್ಕಾರದ ಪರ ಇರಲು ಸಾಧ್ಯ. ಆದ್ದರಿಂದಲೇ ಬಂಡಾಯ ಚಳವಳಿ ಮೇಲೆ ನನ್ನದು ಮೊದಲಿನಿಂದಲೂ ವಿಶ್ಲೇಷಣೆ ಕಣ್ಣು’ ಎಂದು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದರು.<br /> <br /> ಅಂಕಿತ ಪುಸ್ತಕ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಅನುಸಂಧಾನ’ ಮತ್ತು ‘ದೇವರ ಕಣ್ಣು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕ್ರಾಂತಿಕಾರಕ ಮಾತುಗಳಿಗೆ ಸರ್ಕಾರದಲ್ಲಿ ಬೆಲೆ ಸಿಗುವಂತಾಗಬೇಕು. ಆಗಲೇ ಅದು ಸಾರ್ಥಕ ಬಂಡಾಯ’ ಎಂದು ವಿಶ್ಲೇಷಿಸಿದರು.<br /> <br /> ‘ನಾವು ರಚನೆ ಮಾಡಿದ್ದೂ ಒಂದರ್ಥದಲ್ಲಿ ಬಂಡಾಯ ಸಾಹಿತ್ಯವನ್ನೇ. ಹಾಗಿರುವಾಗ ಇದೇನು ಬಂಡಾಯ ಎಂಬ ಉಪೇಕ್ಷೆ ಇತ್ತು. ಬರವಣಿಗೆ ಯಲ್ಲಿ ಮಗ್ನನಾಗಿದ್ದಾಗ ಬೇರೆಯವರ ಸಾಹಿತ್ಯ ಕೃಷಿಯನ್ನು ಸರಿಯಾಗಿ ಗಮನಿಸಲಿಲ್ಲ. ಬರಗೂರರ ಸಾಹಿತ್ಯದ ವಿಷಯವಾಗಿಯೂ ಈ ತಪ್ಪು ಆಗಿದೆ’ ಎಂದು ಹೇಳಿದರು.<br /> <br /> ‘ಪಶ್ಚಿಮದ ದೇಶಗಳಲ್ಲಿ ಸಮಾಜ ಸ್ವಚ್ಛಂದವಾಗಿದ್ದು, ಸರ್ಕಾರಗಳ ನಿರ್ಬಂಧ ಹೆಚ್ಚು. ನಮ್ಮಲ್ಲಿ ಸಮಾಜದ ಒಳಸುಳಿಗಳು ಹೆಚ್ಚಾಗಿದ್ದು, ಸರ್ಕಾರ ಮುಕ್ತವಾಗಿದೆ. ಈ ವಾತಾ ವರಣದಲ್ಲಿ ಬಂಡಾಯದ ಬರಹ ಮತ್ತು ಬರಹ ಗಾರರ ಆಲೋಚನೆಗೆ ನೈಜತೆ ಒದಗಬೇಕಿದೆ’ ಎಂದರು.<br /> <br /> ‘ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ ಮೊದಲು ಸೇವೆಗೆ ನಿಂತಿದ್ದು ಆರ್ಎಸ್ಎಸ್ ಸ್ವಯಂ ಸೇವಕರು. ಸಿಕ್ಕ ಬಂಗಾರವನ್ನು ಅವರು ಸಂತ್ರಸ್ತರಿಗೆ ಕೊಡಲಿಲ್ಲ ವಂತೆ; ಅದು ಬೇರೆ ಮಾತು. ನಮ್ಮ ಎಸ್ಎಫ್ಐ ಹುಡುಗರಿಗೆ ಸಂಘಟನೆ ಸೇರಿ ವರ್ಷದೊಳಗೆ ಕುರ್ಚಿ ಹಿಡಿಯುವ ಹಪಾಹಪಿ. ಸಮಾಜದ ನೋವಿಗೆ ಸ್ಪಂದಿಸುವ ತಂಡ ಬೇಕಲ್ಲವೇ’ ಎಂದು ಪ್ರಶ್ನೆ ಹಾಕಿದರು.<br /> <br /> ‘ಮಾತಿಗೆ ಬಂಡಾಯದ ಗುಣ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು, ‘ಬರಗೂರರ ಮಾತನ್ನು ಕೇಳುವ ದೊಡ್ಡ ಸಮುದಾಯವೇ ಇದೆ. ಸಮಾಜಕ್ಕೆ ಮಿಡಿಯುವ ಯುವಪಡೆಯೊಂದನ್ನು ಅವರು ಕಟ್ಟಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.<br /> <br /> ಕೃತಿಗಳ ಬಗ್ಗೆ ಮಾತನಾಡಿದ ಭಾಷಾ ವಿದ್ವಾಂಸ ಕೆ.ವಿ. ನಾರಾಯಣ, ‘ಗುರುತು– ಗುರಿ ಇಲ್ಲದೆ ಮಾತು ಮತ್ತು ಬರಹ ಚರ್ಮದ ನಾಣ್ಯಗಳಂತೆ ಬೆಲೆ ಕಳೆದುಕೊಂಡಿದ್ದರಿಂದ ಭಾಷೆಗೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ’ ಎಂದು ವಿಷಾದಿಸಿದರು.<br /> <br /> ‘ವಿದ್ಯುನ್ಮಾನ ಮಾಧ್ಯಮದಿಂದ ಒತ್ತಡ ವಿಪರೀತವಾಗಿ ಹೆಚ್ಚಿದ್ದು, ಆ ಕ್ಷಣವೇ ಎಲ್ಲವೂ ತೀರ್ಮಾನವಾಗಬೇಕು ಎಂಬ ಹಟ ಎದ್ದು ಕಾಣುತ್ತಿದೆ. ಕಪ್ಪು–ಬಿಳುಪು ನಡುವಿನ ನೂರಾರು ಬಣ್ಣಗಳು ಯಾರಿಗೂ ಬೇಡವಾಗಿವೆ. ಇಂತಹ ಸಂದರ್ಭದಲ್ಲಿ ಅಭಿಪ್ರಾಯ ರೂಪಿಸುವ ಕೈಂಕರ್ಯದಲ್ಲಿ ತೊಡಗಲು ಧೈರ್ಯಬೇಕು. ಬರಗೂರು ಆ ಕೆಲಸವನ್ನು ಸಮರ್ಥವಾಗಿ ಮಾಡಿಕೊಂಡು ಬಂದಿದ್ದಾರೆ’ ಎಂದು ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಬರಗೂರು, ‘ಕಳೆದ ಎರಡೂವರೆ ವರ್ಷಗಳಿಂದ ನನ್ನ ಯಾವುದೇ ಕೃತಿ ಬಂದಿರಲಿಲ್ಲ. ಸಾಹಿತ್ಯಾಸಕ್ತರಿಗೆ ಇದೊಂದು ಸಂತೋಷದ ಸಂಗತಿಯಾಗಿತ್ತು’ ಎಂದು ಚಟಾಕಿ ಹಾರಿಸಿದರು. ‘ರಾಜಕೀಯ ಸಂಕುಚಿತಗಳನ್ನು ಮೀರಿ ಬೆಳೆದವರು ಎಸ್.ಎಂ.ಕೃಷ್ಣ. ವಾಗ್ವಾದಗಳನ್ನು ಬೆಳೆಸಿದವರು ಅನಂತಮೂರ್ತಿ’ ಎಂದು ಕೊಂಡಾಡಿದರು.<br /> <br /> ‘ಹಿಂದೊಮ್ಮೆ ಪುಸ್ತಕ ಬಿಡುಗಡೆಗೆ ಕರೆದಾಗ ಅನಂತಮೂರ್ತಿ ಬಂದಿರಲಿಲ್ಲ. ಅದೇ ಸಿಟ್ಟಿನಿಂದ ಮತ್ತೆ ಕರೆದಿರಲಿಲ್ಲ. ಇಂತಹ ಅಭಿಪ್ರಾಯಗಳನ್ನು ಅವರ ಮುಂದೆ ಮುಕ್ತವಾಗಿ ಹಂಚಿಕೊಳ್ಳಬಲ್ಲಷ್ಟು ಅನಂತಮೂರ್ತಿ ದೊಡ್ಡವರು’ ಎಂದು ಹೇಳಿದರು.<br /> <br /> <strong>ಬಿಡುಗಡೆಯಾದ ಕೃತಿಗಳು</strong><br /> ಅನುಸಂಧಾನ (ಪುಸ್ತಕಾವಲೋಕನ ಸಂಕಲನ) ಬೆಲೆ: ₨ 295<br /> ದೇವರ ಗುಟ್ಟು (ಸಾಮಾಜಿಕ ಸಂಗತಿಗಳ ಸಂಕಥನ) ಬೆಲೆ: ₨150</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಕ್ರಾಂತಿಕಾರಕ ಭಾಷಣ ಮಾಡಿಯೂ ಸರ್ಕಾರದ ಪರ ಇರಲು ಸಾಧ್ಯ. ಆದ್ದರಿಂದಲೇ ಬಂಡಾಯ ಚಳವಳಿ ಮೇಲೆ ನನ್ನದು ಮೊದಲಿನಿಂದಲೂ ವಿಶ್ಲೇಷಣೆ ಕಣ್ಣು’ ಎಂದು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದರು.<br /> <br /> ಅಂಕಿತ ಪುಸ್ತಕ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಅನುಸಂಧಾನ’ ಮತ್ತು ‘ದೇವರ ಕಣ್ಣು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕ್ರಾಂತಿಕಾರಕ ಮಾತುಗಳಿಗೆ ಸರ್ಕಾರದಲ್ಲಿ ಬೆಲೆ ಸಿಗುವಂತಾಗಬೇಕು. ಆಗಲೇ ಅದು ಸಾರ್ಥಕ ಬಂಡಾಯ’ ಎಂದು ವಿಶ್ಲೇಷಿಸಿದರು.<br /> <br /> ‘ನಾವು ರಚನೆ ಮಾಡಿದ್ದೂ ಒಂದರ್ಥದಲ್ಲಿ ಬಂಡಾಯ ಸಾಹಿತ್ಯವನ್ನೇ. ಹಾಗಿರುವಾಗ ಇದೇನು ಬಂಡಾಯ ಎಂಬ ಉಪೇಕ್ಷೆ ಇತ್ತು. ಬರವಣಿಗೆ ಯಲ್ಲಿ ಮಗ್ನನಾಗಿದ್ದಾಗ ಬೇರೆಯವರ ಸಾಹಿತ್ಯ ಕೃಷಿಯನ್ನು ಸರಿಯಾಗಿ ಗಮನಿಸಲಿಲ್ಲ. ಬರಗೂರರ ಸಾಹಿತ್ಯದ ವಿಷಯವಾಗಿಯೂ ಈ ತಪ್ಪು ಆಗಿದೆ’ ಎಂದು ಹೇಳಿದರು.<br /> <br /> ‘ಪಶ್ಚಿಮದ ದೇಶಗಳಲ್ಲಿ ಸಮಾಜ ಸ್ವಚ್ಛಂದವಾಗಿದ್ದು, ಸರ್ಕಾರಗಳ ನಿರ್ಬಂಧ ಹೆಚ್ಚು. ನಮ್ಮಲ್ಲಿ ಸಮಾಜದ ಒಳಸುಳಿಗಳು ಹೆಚ್ಚಾಗಿದ್ದು, ಸರ್ಕಾರ ಮುಕ್ತವಾಗಿದೆ. ಈ ವಾತಾ ವರಣದಲ್ಲಿ ಬಂಡಾಯದ ಬರಹ ಮತ್ತು ಬರಹ ಗಾರರ ಆಲೋಚನೆಗೆ ನೈಜತೆ ಒದಗಬೇಕಿದೆ’ ಎಂದರು.<br /> <br /> ‘ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ ಮೊದಲು ಸೇವೆಗೆ ನಿಂತಿದ್ದು ಆರ್ಎಸ್ಎಸ್ ಸ್ವಯಂ ಸೇವಕರು. ಸಿಕ್ಕ ಬಂಗಾರವನ್ನು ಅವರು ಸಂತ್ರಸ್ತರಿಗೆ ಕೊಡಲಿಲ್ಲ ವಂತೆ; ಅದು ಬೇರೆ ಮಾತು. ನಮ್ಮ ಎಸ್ಎಫ್ಐ ಹುಡುಗರಿಗೆ ಸಂಘಟನೆ ಸೇರಿ ವರ್ಷದೊಳಗೆ ಕುರ್ಚಿ ಹಿಡಿಯುವ ಹಪಾಹಪಿ. ಸಮಾಜದ ನೋವಿಗೆ ಸ್ಪಂದಿಸುವ ತಂಡ ಬೇಕಲ್ಲವೇ’ ಎಂದು ಪ್ರಶ್ನೆ ಹಾಕಿದರು.<br /> <br /> ‘ಮಾತಿಗೆ ಬಂಡಾಯದ ಗುಣ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು, ‘ಬರಗೂರರ ಮಾತನ್ನು ಕೇಳುವ ದೊಡ್ಡ ಸಮುದಾಯವೇ ಇದೆ. ಸಮಾಜಕ್ಕೆ ಮಿಡಿಯುವ ಯುವಪಡೆಯೊಂದನ್ನು ಅವರು ಕಟ್ಟಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.<br /> <br /> ಕೃತಿಗಳ ಬಗ್ಗೆ ಮಾತನಾಡಿದ ಭಾಷಾ ವಿದ್ವಾಂಸ ಕೆ.ವಿ. ನಾರಾಯಣ, ‘ಗುರುತು– ಗುರಿ ಇಲ್ಲದೆ ಮಾತು ಮತ್ತು ಬರಹ ಚರ್ಮದ ನಾಣ್ಯಗಳಂತೆ ಬೆಲೆ ಕಳೆದುಕೊಂಡಿದ್ದರಿಂದ ಭಾಷೆಗೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ’ ಎಂದು ವಿಷಾದಿಸಿದರು.<br /> <br /> ‘ವಿದ್ಯುನ್ಮಾನ ಮಾಧ್ಯಮದಿಂದ ಒತ್ತಡ ವಿಪರೀತವಾಗಿ ಹೆಚ್ಚಿದ್ದು, ಆ ಕ್ಷಣವೇ ಎಲ್ಲವೂ ತೀರ್ಮಾನವಾಗಬೇಕು ಎಂಬ ಹಟ ಎದ್ದು ಕಾಣುತ್ತಿದೆ. ಕಪ್ಪು–ಬಿಳುಪು ನಡುವಿನ ನೂರಾರು ಬಣ್ಣಗಳು ಯಾರಿಗೂ ಬೇಡವಾಗಿವೆ. ಇಂತಹ ಸಂದರ್ಭದಲ್ಲಿ ಅಭಿಪ್ರಾಯ ರೂಪಿಸುವ ಕೈಂಕರ್ಯದಲ್ಲಿ ತೊಡಗಲು ಧೈರ್ಯಬೇಕು. ಬರಗೂರು ಆ ಕೆಲಸವನ್ನು ಸಮರ್ಥವಾಗಿ ಮಾಡಿಕೊಂಡು ಬಂದಿದ್ದಾರೆ’ ಎಂದು ತಿಳಿಸಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಬರಗೂರು, ‘ಕಳೆದ ಎರಡೂವರೆ ವರ್ಷಗಳಿಂದ ನನ್ನ ಯಾವುದೇ ಕೃತಿ ಬಂದಿರಲಿಲ್ಲ. ಸಾಹಿತ್ಯಾಸಕ್ತರಿಗೆ ಇದೊಂದು ಸಂತೋಷದ ಸಂಗತಿಯಾಗಿತ್ತು’ ಎಂದು ಚಟಾಕಿ ಹಾರಿಸಿದರು. ‘ರಾಜಕೀಯ ಸಂಕುಚಿತಗಳನ್ನು ಮೀರಿ ಬೆಳೆದವರು ಎಸ್.ಎಂ.ಕೃಷ್ಣ. ವಾಗ್ವಾದಗಳನ್ನು ಬೆಳೆಸಿದವರು ಅನಂತಮೂರ್ತಿ’ ಎಂದು ಕೊಂಡಾಡಿದರು.<br /> <br /> ‘ಹಿಂದೊಮ್ಮೆ ಪುಸ್ತಕ ಬಿಡುಗಡೆಗೆ ಕರೆದಾಗ ಅನಂತಮೂರ್ತಿ ಬಂದಿರಲಿಲ್ಲ. ಅದೇ ಸಿಟ್ಟಿನಿಂದ ಮತ್ತೆ ಕರೆದಿರಲಿಲ್ಲ. ಇಂತಹ ಅಭಿಪ್ರಾಯಗಳನ್ನು ಅವರ ಮುಂದೆ ಮುಕ್ತವಾಗಿ ಹಂಚಿಕೊಳ್ಳಬಲ್ಲಷ್ಟು ಅನಂತಮೂರ್ತಿ ದೊಡ್ಡವರು’ ಎಂದು ಹೇಳಿದರು.<br /> <br /> <strong>ಬಿಡುಗಡೆಯಾದ ಕೃತಿಗಳು</strong><br /> ಅನುಸಂಧಾನ (ಪುಸ್ತಕಾವಲೋಕನ ಸಂಕಲನ) ಬೆಲೆ: ₨ 295<br /> ದೇವರ ಗುಟ್ಟು (ಸಾಮಾಜಿಕ ಸಂಗತಿಗಳ ಸಂಕಥನ) ಬೆಲೆ: ₨150</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>