ಕೃಷ್ಣರಾಜಪುರ : ಪೂರ್ವ ತಾಲ್ಲೂಕು ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಬಿಬಿಎಂಪಿ ಒಂದು ವರ್ಷದಿಂದಲೂ ಬಿಲ್ ಪಾವತಿಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ಸದಸ್ಯ ಚಲಪತಿ ದೂರಿದರು.
17 ವಾರ್ಡ್ಗಳಲ್ಲಿ ರಸ್ತೆ ಗುಂಡಿ ಮುಚ್ಚಿದ ಕಾಮಗಾರಿಗಳಿಗೂ ಆದ್ಯತೆಗೆ ಅನುಗುಣವಾಗಿ ಬಿಲ್ ಪಾವತಿಯಾಗಿಲ್ಲ. ಕಡತಗಳನ್ನು ಹಿಡಿದುಕೊಂಡು ಜಂಟಿ ಆಯುಕ್ತರಿಂದ ಸ್ಥಳೀಯ ಬಿಬಿಎಂಪಿ ಮುಖ್ಯ ಎಂಜಿನಿಯರ್ವರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.