ಸೊಳ್ಳೆನಾಶಕ ಬತ್ತಿಗಳ ಪ್ಯಾಕೆಟ್ ಪ್ರಕಾಶ ಎನ್ನುವವರಿಗೆ ಸೇರಿದ್ದು, ಅಂದಾಜು ₹37 ಲಕ್ಷ ಹಾನಿಯಾಗಿದೆ. ಭಾನುವಾರ ರಜೆ ಇದ್ದಿದ್ದರಿಂದ ಗೋದಾಮಿಗೆ ಬೀಗ ಹಾಕಲಾಗಿತ್ತು. ಮಧ್ಯಾಹ್ನ ಗೋದಾಮಿನಿಂದ ಹೊಗೆಬರುತ್ತಿರುವುದನ್ನುನೋಡಿದ ಅಲ್ಲಿನ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೂರು ದಾಖಲಾಗಿದೆ.