‘ರಾಜಭವನ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಕಂಡುಬರುತ್ತದೆ. ಆದರೆ, ಆ ರಸ್ತೆಯಲ್ಲಿ ಗುಂಡಿ ಏಕೆ ಬೀಳುವುದಿಲ್ಲ. ಅಲ್ಲಿ ಗುಂಡಿ ಬಿದ್ದರೆ ಎಂಜಿನಿಯರ್ಗಳ ಕೆಲಸ ಹೋಗುತ್ತದೆ. ಈ ಭಯದಿಂದಲೇ ಅಲ್ಲಿನ ರಸ್ತೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಜನಸಾಮಾನ್ಯರು ವಾಸಿಸುವ ಪ್ರದೇಶಗಳಲ್ಲಿ ಮಾತ್ರ ರಸ್ತೆಗಳು ಗುಂಡಿಮಯವಾಗಿರುತ್ತವೆ’ ಎಂದು ಡಿ.ಎಸ್.ರಾಜಶೇಖರ್ ದೂರಿದರು.