<p><strong>ಬೆಂಗಳೂರು: ‘</strong>ಸಿನಿಮಾ ಒಂದು ಕಾಲದ ಮೌಲ್ಯಗಳನ್ನು ದಾಖಲಿಸುತ್ತದೆ. ಅದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಮೌಲ್ಯಗಳು ಪ್ರಾಪ್ತವಾಗುತ್ತವೆ. ಹಾಗಾಗಿ ಅವುಗಳ ಸಂರಕ್ಷಣೆಗೆ ಮಹತ್ವ ನೀಡಬೇಕು’ ಎಂದು ಫಿಲಂ ಹೆರಿಟೇಜ್ ಫೌಂಡೇಷನ್ ಸಂಸ್ಥಾಪಕ ಶಿವೇಂದ್ರ ಸಿಂಗ್ ಡುಂಗರ್ಪುರ್ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಇಲ್ಲಿ ಏರ್ಪಡಿಸಿದ್ದ ‘ಕನ್ನಡ ಚಲನಚಿತ್ರ ಪರಂಪರೆಯ ಸಂರಕ್ಷಣೆ ಮತ್ತು ಸಂಗ್ರಹ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಸಿನಿಮಾ ಒಂದು ಕಾಲಘಟ್ಟದ ವರ್ಣತಂತು (ಡಿಎನ್ಎ) ಇದ್ದಂತೆ. ನಾವು ಎಲ್ಲಿಂದ ಬಂದೆವು ಎಂಬುದನ್ನು ಅದು ತಿಳಿಸುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ಮುಂದೆ ಸಾಗಬೇಕಾದ ದಾರಿಯ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅವರು ಹೇಳಿದರು.</p>.<p>ಸೆಲ್ಯುಲಾಲ್ಡ್ ಸಿನಿಮಾಗಳ ಅನೇಕ ಮೂಲ ನೆಗೆಟಿವ್ಗಳು ಕಣ್ಮರೆ ಆಗಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ ಅವರು, ‘ಹಿಂದಿನವರು ಭಾರತೀಯರು ಸಿನಿಮಾವನ್ನು ಸಾಮೂಹಿಕ ಮನರಂಜನೆಯ ಮಾಧ್ಯಮವನ್ನಾಗಿ ನೋಡಿದರು. ಅದನ್ನು ಕಲೆ ಎಂದು ಪರಿಗಣಿಸಲಿಲ್ಲ. ಅನೇಕ ಚಲನಚಿತ್ರಗಳ ಮೂಲಪ್ರತಿಗಳು ನಾಶವಾಗುವುದಕ್ಕೆ ಈ ಮನೋಭಾವವೇ ಕಾರಣ’ ಎಂದರು.</p>.<p>‘ಭಾರತೀಯ ಚಿತ್ರರಂಗದ ಚಟುವಟಿಕೆ ಕರಾವಳಿಯ ನಗರಗಳಾದ ಮುಂಬೈ, ಚೆನ್ನೈ, ಕೊಲ್ಕತ್ತಗಳಲ್ಲಿ ಕೇಂದ್ರೀಕೃತವಾಗಿತ್ತು. ಇಲ್ಲಿ ತೇವಾಂಶ ಜಾಸ್ತಿ. ಹಾಗಾಗಿ ಮೂಲಪ್ರತಿಗಳನ್ನು ಸಂರಕ್ಷಿಸುವುದು ಸವಾಲಿನಕೆಲಸ. ಅದಕ್ಕೆ ಪೂರಕ ವ್ಯವಸ್ಥೆಯೂ ನಮ್ಮಲ್ಲಿಲ್ಲ’ ಎಂದು ತಿಳಿಸಿದರು.</p>.<p>‘ಸೆಲ್ಯುಲಾಯ್ಡ್ ನೆಗೆಟಿವ್ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಿದ ಮಾತ್ರಕ್ಕೆ ಸಿನಿಮಾ ರಕ್ಷಣೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಸೆಲ್ಯುಲಾಯ್ಡ್ ಫಿಲ್ಮ್ನ ಮೂಲಪ್ರತಿಯನ್ನೂ ಕಾಪಾಡಬೇಕು. ಅದಕ್ಕೆ ಅದರದ್ದೇ ಆದ ಮೌಲ್ಯವಿದೆ’ ಎಂದರು.</p>.<p>ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಸಾಬೂನನ್ನು ಬಳಸಿದ ಬಳಿಕ ಅದರ ಕವಚವನ್ನು ಬಿಸಾಡುವವರು ನಾವು. ಅಂತೆಯೇ ಒಂದು ಸಿನಿಮಾ ಲಾಭ ತರುವುದನ್ನು ನಿಲ್ಲಿಸಿದ ಬಳಿಕ ನಿರ್ಮಾಪಕರು ಅದನ್ನು ರಕ್ಷಿಸಿಡುವ ಕಾಳಜಿ ವಹಿಸುವುದಿಲ್ಲ. ಕನಿಷ್ಠ ಪಕ್ಷ ಸ್ಟುಡಿಯೊಗಳಾದರೂ ಉತ್ತಮ ಚಲನಚಿತ್ರಗಳನ್ನು ಉಳಿಸಿಕೊಳ್ಳಬಹುದಾಗಿತ್ತು’ ಎಂದರು.</p>.<p>‘ನಾನು ನಿರ್ದೇಶಿಸಿರುವ ಎಲ್ಲ ಸಿನಿಮಾಗಳ ಮೂಲಪ್ರತಿಯನ್ನು ನಿರ್ಮಾಪಕರಿಂದ ತರಿಸಿಕೊಂಡು ಅದನ್ನು ಫಿಲಂ ಹೆರಿಟೇಜ್ ಫೌಂಡೇಷನ್ಗೆ ನೀಡುತ್ತೇನೆ’ ಎಂದು ಅವರು ಹೇಳಿದರು..ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ‘ಸಿನಿಮಾ ಸಂರಕ್ಷಣೆಗೆ ಸರ್ಕಾರ ಈ ಹಿಂದೆ ₹2 ಕೋಟಿ ಅನುದಾನ ನೀಡಿತ್ತು. ಆ ಹಣವನ್ನು ಬಳಸಿಕೊಳ್ಳಲಿಲ್ಲ. ಉತ್ತಮ ಕನ್ನಡ ಸಿನಿಮಾಗಳ ಸಂರಕ್ಷಣೆಗೆ ರೂಪರೇಷೆ ಸಿದ್ಧಪಡಿಸಿ ಮತ್ತೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದರು.</p>.<p>***</p>.<p>"ಒಂದು ಸಿನಿಮಾದ ಮೂಲಪ್ರತಿಯನ್ನು ಕಳೆದುಕೊಳ್ಳುವುದು ತಾಯಿಯನ್ನು ಕಳೆದುಕೊಂಡಂತೆ"<br /> <strong>ಶಿವೇಂದ್ರಸಿಂಗ್ ಡುಂಗರ್ಪುರ್, ಫಿಲಂ ಹೆರಿಟೇಜ್ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕ</strong></p>.<p>***</p>.<p>ಸಂರಕ್ಷಣೆಯ ಮಹತ್ವ ತಿಳಿಯದ ಕಾರಣ ಸಿನಿಮಾಗಳ ನೈಟ್ರೇಟ್ ಫಿಲ್ಮ್ಗಳು ಗುಜರಿಗೆ ಸೇರಿವೆ. ಅವು ಬಳೆಗಳಾಗಿ, ಚಪ್ಪಲಿಗಳಾಗಿ ಮಾರ್ಪಟ್ಟಿವೆ<br /> ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ</p>.<p>***</p>.<p>1,700 - ಮೂಕಿಚಿತ್ರಗಳು ಭಾರತದಲ್ಲಿ ನಿರ್ಮಾಣ<br /> 99% - ಮೂಕಿಚಿತ್ರಗಳು ಈಗ ಲಭ್ಯ ಇಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಸಿನಿಮಾ ಒಂದು ಕಾಲದ ಮೌಲ್ಯಗಳನ್ನು ದಾಖಲಿಸುತ್ತದೆ. ಅದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಮೌಲ್ಯಗಳು ಪ್ರಾಪ್ತವಾಗುತ್ತವೆ. ಹಾಗಾಗಿ ಅವುಗಳ ಸಂರಕ್ಷಣೆಗೆ ಮಹತ್ವ ನೀಡಬೇಕು’ ಎಂದು ಫಿಲಂ ಹೆರಿಟೇಜ್ ಫೌಂಡೇಷನ್ ಸಂಸ್ಥಾಪಕ ಶಿವೇಂದ್ರ ಸಿಂಗ್ ಡುಂಗರ್ಪುರ್ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಸೋಮವಾರ ಇಲ್ಲಿ ಏರ್ಪಡಿಸಿದ್ದ ‘ಕನ್ನಡ ಚಲನಚಿತ್ರ ಪರಂಪರೆಯ ಸಂರಕ್ಷಣೆ ಮತ್ತು ಸಂಗ್ರಹ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಸಿನಿಮಾ ಒಂದು ಕಾಲಘಟ್ಟದ ವರ್ಣತಂತು (ಡಿಎನ್ಎ) ಇದ್ದಂತೆ. ನಾವು ಎಲ್ಲಿಂದ ಬಂದೆವು ಎಂಬುದನ್ನು ಅದು ತಿಳಿಸುತ್ತದೆ. ಅದನ್ನು ಅರ್ಥ ಮಾಡಿಕೊಂಡರೆ ಮುಂದೆ ಸಾಗಬೇಕಾದ ದಾರಿಯ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಅವರು ಹೇಳಿದರು.</p>.<p>ಸೆಲ್ಯುಲಾಲ್ಡ್ ಸಿನಿಮಾಗಳ ಅನೇಕ ಮೂಲ ನೆಗೆಟಿವ್ಗಳು ಕಣ್ಮರೆ ಆಗಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ ಅವರು, ‘ಹಿಂದಿನವರು ಭಾರತೀಯರು ಸಿನಿಮಾವನ್ನು ಸಾಮೂಹಿಕ ಮನರಂಜನೆಯ ಮಾಧ್ಯಮವನ್ನಾಗಿ ನೋಡಿದರು. ಅದನ್ನು ಕಲೆ ಎಂದು ಪರಿಗಣಿಸಲಿಲ್ಲ. ಅನೇಕ ಚಲನಚಿತ್ರಗಳ ಮೂಲಪ್ರತಿಗಳು ನಾಶವಾಗುವುದಕ್ಕೆ ಈ ಮನೋಭಾವವೇ ಕಾರಣ’ ಎಂದರು.</p>.<p>‘ಭಾರತೀಯ ಚಿತ್ರರಂಗದ ಚಟುವಟಿಕೆ ಕರಾವಳಿಯ ನಗರಗಳಾದ ಮುಂಬೈ, ಚೆನ್ನೈ, ಕೊಲ್ಕತ್ತಗಳಲ್ಲಿ ಕೇಂದ್ರೀಕೃತವಾಗಿತ್ತು. ಇಲ್ಲಿ ತೇವಾಂಶ ಜಾಸ್ತಿ. ಹಾಗಾಗಿ ಮೂಲಪ್ರತಿಗಳನ್ನು ಸಂರಕ್ಷಿಸುವುದು ಸವಾಲಿನಕೆಲಸ. ಅದಕ್ಕೆ ಪೂರಕ ವ್ಯವಸ್ಥೆಯೂ ನಮ್ಮಲ್ಲಿಲ್ಲ’ ಎಂದು ತಿಳಿಸಿದರು.</p>.<p>‘ಸೆಲ್ಯುಲಾಯ್ಡ್ ನೆಗೆಟಿವ್ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಿದ ಮಾತ್ರಕ್ಕೆ ಸಿನಿಮಾ ರಕ್ಷಣೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಸೆಲ್ಯುಲಾಯ್ಡ್ ಫಿಲ್ಮ್ನ ಮೂಲಪ್ರತಿಯನ್ನೂ ಕಾಪಾಡಬೇಕು. ಅದಕ್ಕೆ ಅದರದ್ದೇ ಆದ ಮೌಲ್ಯವಿದೆ’ ಎಂದರು.</p>.<p>ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ಸಾಬೂನನ್ನು ಬಳಸಿದ ಬಳಿಕ ಅದರ ಕವಚವನ್ನು ಬಿಸಾಡುವವರು ನಾವು. ಅಂತೆಯೇ ಒಂದು ಸಿನಿಮಾ ಲಾಭ ತರುವುದನ್ನು ನಿಲ್ಲಿಸಿದ ಬಳಿಕ ನಿರ್ಮಾಪಕರು ಅದನ್ನು ರಕ್ಷಿಸಿಡುವ ಕಾಳಜಿ ವಹಿಸುವುದಿಲ್ಲ. ಕನಿಷ್ಠ ಪಕ್ಷ ಸ್ಟುಡಿಯೊಗಳಾದರೂ ಉತ್ತಮ ಚಲನಚಿತ್ರಗಳನ್ನು ಉಳಿಸಿಕೊಳ್ಳಬಹುದಾಗಿತ್ತು’ ಎಂದರು.</p>.<p>‘ನಾನು ನಿರ್ದೇಶಿಸಿರುವ ಎಲ್ಲ ಸಿನಿಮಾಗಳ ಮೂಲಪ್ರತಿಯನ್ನು ನಿರ್ಮಾಪಕರಿಂದ ತರಿಸಿಕೊಂಡು ಅದನ್ನು ಫಿಲಂ ಹೆರಿಟೇಜ್ ಫೌಂಡೇಷನ್ಗೆ ನೀಡುತ್ತೇನೆ’ ಎಂದು ಅವರು ಹೇಳಿದರು..ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ‘ಸಿನಿಮಾ ಸಂರಕ್ಷಣೆಗೆ ಸರ್ಕಾರ ಈ ಹಿಂದೆ ₹2 ಕೋಟಿ ಅನುದಾನ ನೀಡಿತ್ತು. ಆ ಹಣವನ್ನು ಬಳಸಿಕೊಳ್ಳಲಿಲ್ಲ. ಉತ್ತಮ ಕನ್ನಡ ಸಿನಿಮಾಗಳ ಸಂರಕ್ಷಣೆಗೆ ರೂಪರೇಷೆ ಸಿದ್ಧಪಡಿಸಿ ಮತ್ತೆ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದರು.</p>.<p>***</p>.<p>"ಒಂದು ಸಿನಿಮಾದ ಮೂಲಪ್ರತಿಯನ್ನು ಕಳೆದುಕೊಳ್ಳುವುದು ತಾಯಿಯನ್ನು ಕಳೆದುಕೊಂಡಂತೆ"<br /> <strong>ಶಿವೇಂದ್ರಸಿಂಗ್ ಡುಂಗರ್ಪುರ್, ಫಿಲಂ ಹೆರಿಟೇಜ್ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕ</strong></p>.<p>***</p>.<p>ಸಂರಕ್ಷಣೆಯ ಮಹತ್ವ ತಿಳಿಯದ ಕಾರಣ ಸಿನಿಮಾಗಳ ನೈಟ್ರೇಟ್ ಫಿಲ್ಮ್ಗಳು ಗುಜರಿಗೆ ಸೇರಿವೆ. ಅವು ಬಳೆಗಳಾಗಿ, ಚಪ್ಪಲಿಗಳಾಗಿ ಮಾರ್ಪಟ್ಟಿವೆ<br /> ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ</p>.<p>***</p>.<p>1,700 - ಮೂಕಿಚಿತ್ರಗಳು ಭಾರತದಲ್ಲಿ ನಿರ್ಮಾಣ<br /> 99% - ಮೂಕಿಚಿತ್ರಗಳು ಈಗ ಲಭ್ಯ ಇಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>