ವಿಚಾರಣೆ ವೇಳೆ ಮೆಟ್ರೊ ನೌಕರರ ಸಂಘದ ಪರ ವಕೀಲರು ವಾದ ಮಂಡಿಸಿ, ‘ಹೈಕೋರ್ಟ್ ಆದೇಶದ ಅನುಸಾರ ಈ ಹಿಂದೆ ಮಾರ್ಚ್ 22ರಂದು ಕರೆಯಲಾಗಿದ್ದ ಮುಷ್ಕರವನ್ನು ಹಿಂಪಡೆಯಲಾಗಿತ್ತು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಿಎಂಆರ್ಸಿಎಲ್ ಆಡಳಿತ ಮಂಡಳಿಯೊಂದಿಗೆ ಒಂದು ತಿಂಗಳ ಕಾಲ ಸಭೆಗಳನ್ನೂ ನಡೆಸಲಾಯಿತು. ಆದರೆ ಆ ಸಭೆಗಳು ಸಂಪೂರ್ಣ ವಿಫಲವಾಗಿವೆ. ಶೇ. 10ರಷ್ಟೂ ಬೇಡಿಕೆಗಳು ಈಡೇರಿಲ್ಲ’ ಎಂದು ದೂರಿದರು.