ನ್ಯೂಸ್ ಹಂಟ್ ಸಂಸ್ಥೆ ಉಚಿತವಾಗಿ ಈ ಕಾರ್ಯ ಮಾಡಿಕೊಡುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.
‘ಕವಿರಾಜಮಾರ್ಗ, ಉತ್ತರ ಕರ್ನಾಟಕದ ಜನಪದ ಸಾಹಿತ್ಯ ಸಂಪುಟ, ಕ್ರಾಂತಿ ಕಲ್ಯಾಣ, ಕನಕದಾಸರ ಕುರಿತ ಕೃತಿಗಳು ಸೇರಿದಂತೆ ಒಟ್ಟು 26 ಕೃತಿಗಳು ಮೊಬೈಲ್ನಲ್ಲಿ ಈಗ ಲಭ್ಯ ಇವೆ. ಎಲ್ಲವೂ ದೊಡ್ಡ ದೊಡ್ಡ ಕೃತಿಗಳು. ಕೆಲವೇ ದಿನಗಳಲ್ಲಿ ಕನ್ನಡ ಸಾಹಿತ್ಯದ ಲಕ್ಷಾಂತರ ಪುಟಗಳು ಮೊಬೈಲ್ನಲ್ಲಿ ಸಿಗಲಿವೆ’ ಎಂದರು.
ಕಾಗದರಹಿತ ಕಚೇರಿ: ಏಪ್ರಿಲ್ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಗದರಹಿತ ಕಚೇರಿ ಆಗಲಿದೆ. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ರಾಜ್ಯದ ಮೊದಲ ಕಾಗದರಹಿತ ಕಚೇರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣವೂ ಬೀಳಲಿದೆ ಎಂದು ಅವರು ತಿಳಿಸಿದರು.
ಕನ್ನಡ ವಿಕಿಪೀಡಿಯಾದ ಜವಾಬ್ದಾರಿ ಜುಲೈ ತಿಂಗಳಿಂದ ಇಲಾಖೆಗೆ ಬರಲಿದೆ. ಈಗ ಮಾಹಿತಿ ತಂತ್ರಜ್ಞಾನ ಇಲಾಖೆ ಬಳಿ ಇದೆ. ಇಲಾಖೆ ಪ್ರಕಟಿಸಿದ 140 ಕೃತಿಗಳನ್ನು ಕನ್ನಡ ವಿಕಿಪೀಡಿಯಾಕ್ಕೆ ಹಾಕಲಾಗುವುದು ಎಂದರು.