<p><strong>ಯಲಹಂಕ:</strong> ಪಾಶ್ಚಿಮಾತ್ಯ ದೇಶದ ವೈಜ್ಞಾನಿಕ ಅನ್ವೇಷಣೆಯೊಂದಿಗೆ ಭಾರತೀಯ ಯೋಗ ವಿಜ್ಞಾನ ಸಮ್ಮಿಲನವಾದಲ್ಲಿ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗ ವಿಶ್ವವಿದ್ಯಾಲಯದ (ಡೀಮ್ಡ) ಅಂತರರಾಷ್ಟ್ರೀಯ ಸಂಚಾಲಕ ಎನ್.ವಿ.ರಘುರಾಮ್ ಅಭಿಪ್ರಾಯಪಟ್ಟರು.<br /> <br /> ಉಪನಗರ 2ನೇ ಹಂತದ `ಎ' ಸೆಕ್ಟರ್ನಲ್ಲಿ ಯೋಗ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಈ ನಿಟ್ಟಿನಲ್ಲಿ ಮೊದಲ ಹಂತದ ಪ್ರಯೋಗ ಆರಂಭವಾಗಿದ್ದು, 50 ಲಕ್ಷ ಡಾಲರ್ ಯೋಜನೆಯೊಂದು ಸದ್ಯದಲ್ಲೆ ಅಸ್ತಿತ್ವಕ್ಕೆ ಬರಲಿದೆ.<br /> <br /> ಇದರಿಂದ ಯೋಗದ ವಿವಿಧ ವಿಭಾಗಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಕನಸನ್ನು ನನಸುಗೊಳಿಸುವ ಸಮಯ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ' ಎಂದರು.<br /> <br /> ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್.ರಾಮಕೃಷ್ಣ ಮಾತನಾಡಿ, ಇಂದಿನ ಪರಿಸರವನ್ನು ಗಮನಿಸಿದರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಯೋಗ ಅತ್ಯವಶ್ಯಕವೆನಿಸಿದೆ ಎಂದರು.<br /> <br /> `ಉಪಾಧ್ಯಾಯರು ಮಕ್ಕಳನ್ನು ನಿಯತ್ರಿಸುವುದೆ ಕಷ್ಟವಾಗುತ್ತಿದ್ದು, ಮತ್ತೊಂದೆಡೆ ಪೋಷಕರು ತಮ್ಮ ಹುದ್ದೆ ಮತ್ತು ಸಮಸ್ಯೆಗಳ ನಡುವೆ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಾರೆ.<br /> <br /> ಈ ದಿಸೆಯಲ್ಲಿ ಎಲ್ಲ ಕಡೆಗಳಲ್ಲಿ ಯೋಗ ತರಗತಿಗಳನ್ನು ವಿಸ್ತರಿಸುವ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಬೇಕಾಗಿದೆ' ಎಂದು ಅವರು ಹೇಳಿದರು.<br /> <br /> ಯೋಗ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಯೋಗವನ್ನು ವೈಜ್ಞಾನಿಕವಾಗಿ ಕಲಿಸುವುದು ಮತ್ತು ಎಲ್ಲಡೆ ಹರಡುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಜೀವನವನ್ನು ಸಮಗ್ರ ಚಿಕಿತ್ಸೆಯಿಂದ ಆರೋಗ್ಯಮಯ ಮತ್ತು ಆನಂದಮಯವಾಗಿಸುವುದು ಯೋಗ ವಿಜ್ಞಾನ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.<br /> <br /> ಯೋಗ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಸಿಂಗ್ಲಾಚಾರ್, ಕಾರ್ಯದರ್ಶಿ ಬಿ.ಎ.ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ:</strong> ಪಾಶ್ಚಿಮಾತ್ಯ ದೇಶದ ವೈಜ್ಞಾನಿಕ ಅನ್ವೇಷಣೆಯೊಂದಿಗೆ ಭಾರತೀಯ ಯೋಗ ವಿಜ್ಞಾನ ಸಮ್ಮಿಲನವಾದಲ್ಲಿ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಯೋಗ ವಿಶ್ವವಿದ್ಯಾಲಯದ (ಡೀಮ್ಡ) ಅಂತರರಾಷ್ಟ್ರೀಯ ಸಂಚಾಲಕ ಎನ್.ವಿ.ರಘುರಾಮ್ ಅಭಿಪ್ರಾಯಪಟ್ಟರು.<br /> <br /> ಉಪನಗರ 2ನೇ ಹಂತದ `ಎ' ಸೆಕ್ಟರ್ನಲ್ಲಿ ಯೋಗ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಈ ನಿಟ್ಟಿನಲ್ಲಿ ಮೊದಲ ಹಂತದ ಪ್ರಯೋಗ ಆರಂಭವಾಗಿದ್ದು, 50 ಲಕ್ಷ ಡಾಲರ್ ಯೋಜನೆಯೊಂದು ಸದ್ಯದಲ್ಲೆ ಅಸ್ತಿತ್ವಕ್ಕೆ ಬರಲಿದೆ.<br /> <br /> ಇದರಿಂದ ಯೋಗದ ವಿವಿಧ ವಿಭಾಗಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಕನಸನ್ನು ನನಸುಗೊಳಿಸುವ ಸಮಯ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ' ಎಂದರು.<br /> <br /> ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್.ರಾಮಕೃಷ್ಣ ಮಾತನಾಡಿ, ಇಂದಿನ ಪರಿಸರವನ್ನು ಗಮನಿಸಿದರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಯೋಗ ಅತ್ಯವಶ್ಯಕವೆನಿಸಿದೆ ಎಂದರು.<br /> <br /> `ಉಪಾಧ್ಯಾಯರು ಮಕ್ಕಳನ್ನು ನಿಯತ್ರಿಸುವುದೆ ಕಷ್ಟವಾಗುತ್ತಿದ್ದು, ಮತ್ತೊಂದೆಡೆ ಪೋಷಕರು ತಮ್ಮ ಹುದ್ದೆ ಮತ್ತು ಸಮಸ್ಯೆಗಳ ನಡುವೆ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಾರೆ.<br /> <br /> ಈ ದಿಸೆಯಲ್ಲಿ ಎಲ್ಲ ಕಡೆಗಳಲ್ಲಿ ಯೋಗ ತರಗತಿಗಳನ್ನು ವಿಸ್ತರಿಸುವ ಮೂಲಕ ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜವನ್ನು ಕಟ್ಟಬೇಕಾಗಿದೆ' ಎಂದು ಅವರು ಹೇಳಿದರು.<br /> <br /> ಯೋಗ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಯೋಗವನ್ನು ವೈಜ್ಞಾನಿಕವಾಗಿ ಕಲಿಸುವುದು ಮತ್ತು ಎಲ್ಲಡೆ ಹರಡುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಜೀವನವನ್ನು ಸಮಗ್ರ ಚಿಕಿತ್ಸೆಯಿಂದ ಆರೋಗ್ಯಮಯ ಮತ್ತು ಆನಂದಮಯವಾಗಿಸುವುದು ಯೋಗ ವಿಜ್ಞಾನ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.<br /> <br /> ಯೋಗ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಸಿಂಗ್ಲಾಚಾರ್, ಕಾರ್ಯದರ್ಶಿ ಬಿ.ಎ.ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>