<p><strong>ಬೆಂಗಳೂರು: </strong>ಕಾಚರಕನಹಳ್ಳಿಯಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ 62 ಅಡಿ ಏಕಶಿಲಾ ಹನುಮ ಮೂರ್ತಿ ಸಾಗಿಸುತ್ತಿದ್ದ ವಾಹನ, ಹೆಣ್ಣೂರು– ಬಾಗಲೂರು ರಸ್ತೆಯಲ್ಲೇ ಶನಿವಾರ ಮಧ್ಯಾಹ್ನ ನಿಂತುಕೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.</p>.<p>ಹೊಸಕೋಟೆ ಕಡೆಯಿಂದ ನಗರಕ್ಕೆ ತರುತ್ತಿದ್ದ ಮೂರ್ತಿಯು ಹೆಣ್ಣೂರು ಸಮೀಪದ ರೈಲ್ವೆ ಕೆಳ ಸೇತುವೆ ಮೂಲಕ ಹಾದು ಹೋಗಬೇಕಿತ್ತು. ಆದರೆ, ಮೂರ್ತಿ ಹೊತ್ತ ವಾಹನವು ಹಾದು ಹೋಗುವಷ್ಟು ಸ್ಥಳಾವಕಾಶ ಈ ಕೆಳ ಸೇತುವೆಯಲ್ಲಿ ಇಲ್ಲ. ಹಾಗಾಗಿ, ಸೇತುವೆ ಎದುರೇ ವಾಹನವನ್ನು ನಿಲ್ಲಿಸಲಾಯಿತು.</p>.<p>ವಾಹನವು ರಸ್ತೆ ಮಧ್ಯೆಯೇ ಇದ್ದಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸೇತುವೆಯಿಂದ 3 ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಬಾಣಸವಾಡಿ ಸಂಚಾರ ಪೊಲೀಸರು, ಮೂರ್ತಿ ಇದ್ದ ವಾಹನವನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚಿಸಿದರು. ಬಳಿಕವೇ ದಟ್ಟಣೆಯು ನಿಯಂತ್ರಣಕ್ಕೆ ಬಂತು.</p>.<p><strong>ರೈಲ್ವೆ ಇಲಾಖೆ ಅನುಮತಿ ಅಗತ್ಯ:</strong> ‘ಮೂರ್ತಿಯು ನಗರಕ್ಕೆ ಹೋಗಬೇಕಾದರೆ ಸೇತುವೆಯಲ್ಲಿ ರ್ಯಾಂಪ್ ನಿರ್ಮಿಸಬೇಕು. ಅದಕ್ಕೆ ರೈಲ್ವೆ ಇಲಾಖೆಯ ಅನುಮತಿ ಅಗತ್ಯ. ರೈಲ್ವೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ರಾತ್ರಿ ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>'ಮೂರ್ತಿ ಹೊತ್ತ ಲಾರಿಯು 26 ಅಡಿ ಅಗಲವಿದೆ. 750 ಟನ್ ಭಾರವಿದೆ. ಭಾನುವಾರ ಸಂಜೆ ನಂತರವೇ ಈ ವಾಹನವು ಸೇತುವೆ ಮೂಲಕ ಹಾದು ಹೋಗಬಹುದು. ಅಲ್ಲಿಯವರೆಗೂ ವಾಹನಗಳ ಸಂಚಾರ ಸುಗಮಗೊಳಿಸಲು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ’ ಎಂದರು.</p>.<p>‘ಬಸ್ಸಿನಲ್ಲಿ ಹೋಗುವ ಜನ, ಕೈ ಮುಗಿದು ಮುಂದೆ ಹೋಗುತ್ತಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಪ್ರಯಾಣಿಸುವವರು, ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಮೂರ್ತಿ ನೋಡುತ್ತಿದ್ದಾರೆ. ಇದು ಕೂಡ ದಟ್ಟಣೆಗೆ ಕಾರಣ’ ಎಂದರು.</p>.<p>ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಭೈರಸಂದ್ರ ಗ್ರಾಮದಿಂದ ಈ ಮೂರ್ತಿಯನ್ನು ನಗರಕ್ಕೆ ತರಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಮೂರ್ತಿಯನ್ನು ಕೆಲ ದಿನಗಳ ಹಿಂದಷ್ಟೇ ಹೊಸಕೋಟೆಯ ದಂಡುಪಾಳ್ಯದ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಮೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯಲು ಅನುಮತಿ ನೀಡಿದ್ದರು.</p>.<p>ಎಚ್ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ‘ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್’ ವತಿಯಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾಚರಕನಹಳ್ಳಿಯಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ 62 ಅಡಿ ಏಕಶಿಲಾ ಹನುಮ ಮೂರ್ತಿ ಸಾಗಿಸುತ್ತಿದ್ದ ವಾಹನ, ಹೆಣ್ಣೂರು– ಬಾಗಲೂರು ರಸ್ತೆಯಲ್ಲೇ ಶನಿವಾರ ಮಧ್ಯಾಹ್ನ ನಿಂತುಕೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.</p>.<p>ಹೊಸಕೋಟೆ ಕಡೆಯಿಂದ ನಗರಕ್ಕೆ ತರುತ್ತಿದ್ದ ಮೂರ್ತಿಯು ಹೆಣ್ಣೂರು ಸಮೀಪದ ರೈಲ್ವೆ ಕೆಳ ಸೇತುವೆ ಮೂಲಕ ಹಾದು ಹೋಗಬೇಕಿತ್ತು. ಆದರೆ, ಮೂರ್ತಿ ಹೊತ್ತ ವಾಹನವು ಹಾದು ಹೋಗುವಷ್ಟು ಸ್ಥಳಾವಕಾಶ ಈ ಕೆಳ ಸೇತುವೆಯಲ್ಲಿ ಇಲ್ಲ. ಹಾಗಾಗಿ, ಸೇತುವೆ ಎದುರೇ ವಾಹನವನ್ನು ನಿಲ್ಲಿಸಲಾಯಿತು.</p>.<p>ವಾಹನವು ರಸ್ತೆ ಮಧ್ಯೆಯೇ ಇದ್ದಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸೇತುವೆಯಿಂದ 3 ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಬಾಣಸವಾಡಿ ಸಂಚಾರ ಪೊಲೀಸರು, ಮೂರ್ತಿ ಇದ್ದ ವಾಹನವನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚಿಸಿದರು. ಬಳಿಕವೇ ದಟ್ಟಣೆಯು ನಿಯಂತ್ರಣಕ್ಕೆ ಬಂತು.</p>.<p><strong>ರೈಲ್ವೆ ಇಲಾಖೆ ಅನುಮತಿ ಅಗತ್ಯ:</strong> ‘ಮೂರ್ತಿಯು ನಗರಕ್ಕೆ ಹೋಗಬೇಕಾದರೆ ಸೇತುವೆಯಲ್ಲಿ ರ್ಯಾಂಪ್ ನಿರ್ಮಿಸಬೇಕು. ಅದಕ್ಕೆ ರೈಲ್ವೆ ಇಲಾಖೆಯ ಅನುಮತಿ ಅಗತ್ಯ. ರೈಲ್ವೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ರಾತ್ರಿ ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>'ಮೂರ್ತಿ ಹೊತ್ತ ಲಾರಿಯು 26 ಅಡಿ ಅಗಲವಿದೆ. 750 ಟನ್ ಭಾರವಿದೆ. ಭಾನುವಾರ ಸಂಜೆ ನಂತರವೇ ಈ ವಾಹನವು ಸೇತುವೆ ಮೂಲಕ ಹಾದು ಹೋಗಬಹುದು. ಅಲ್ಲಿಯವರೆಗೂ ವಾಹನಗಳ ಸಂಚಾರ ಸುಗಮಗೊಳಿಸಲು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ’ ಎಂದರು.</p>.<p>‘ಬಸ್ಸಿನಲ್ಲಿ ಹೋಗುವ ಜನ, ಕೈ ಮುಗಿದು ಮುಂದೆ ಹೋಗುತ್ತಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಪ್ರಯಾಣಿಸುವವರು, ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಮೂರ್ತಿ ನೋಡುತ್ತಿದ್ದಾರೆ. ಇದು ಕೂಡ ದಟ್ಟಣೆಗೆ ಕಾರಣ’ ಎಂದರು.</p>.<p>ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಭೈರಸಂದ್ರ ಗ್ರಾಮದಿಂದ ಈ ಮೂರ್ತಿಯನ್ನು ನಗರಕ್ಕೆ ತರಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಮೂರ್ತಿಯನ್ನು ಕೆಲ ದಿನಗಳ ಹಿಂದಷ್ಟೇ ಹೊಸಕೋಟೆಯ ದಂಡುಪಾಳ್ಯದ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಮೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯಲು ಅನುಮತಿ ನೀಡಿದ್ದರು.</p>.<p>ಎಚ್ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಕೋದಂಡರಾಮಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ‘ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್’ ವತಿಯಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>