ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಮಳೆ ಧರೆಗುರುಳಿದ ಮರಗಳು

Last Updated 3 ಮಾರ್ಚ್ 2015, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಏಳು ಮರಗಳು ಧರೆ­ಗುರುಳಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ರಾತ್ರಿ 8.15ಕ್ಕೆ ಆರಂಭವಾದ ಮಳೆು 11.30ರವರೆಗೆ ಸುರಿಯಿತು. ಜೆ.ಪಿ.ನಗ­ರದ 33ನೇ ಅಡ್ಡರಸ್ತೆ, ಬಾಷ್ಯಂ ವೃತ್ತ, ಪದ್ಮನಾಭ­ನಗರ 13ನೇ ಮುಖ್ಯರಸ್ತೆ, ರಾಜ­ರಾಜೇಶ್ವರಿ­ನಗರ ಸಮೀಪದ ಐಡಿಯಲ್ ಹೋಮ್ಸ್‌, ಮತ್ತೀಕೆರೆ 9ನೇ ಅಡ್ಡರಸ್ತೆ, ಎಚ್‌ಎಂಟಿ ಲೇಔಟ್‌ ಸೇರಿ ವಿವಿಧೆಡೆ ಮರಗಳು ಧರೆಗುರುಳಿದವು.

ಪದ್ಮನಾಭನಗರ, ಕಮಲಮ್ಮನ­ಗುಂಡಿ, ಪರಿಮಳ­ನಗರ, ಶಿವನಗರ, ಕುರುಬರ­ಹಳ್ಳಿ, ಪ್ರಕಾಶ್‌ನಗರ ನಾಲ್ಕನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ರಾಮಮೂರ್ತಿನಗರ, ವಿಜಿನಾಪುರ, ಕವದೇನಹಳ್ಳಿ, ಮಂಗಮ್ಮನ­ಪಾಳ್ಯ, ಕಗ್ಗದಾಸನಪುರ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

‘ನಗರದದಲ್ಲಿ 10.2 ಮಿ.ಮೀ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತ 23.8 ಮಿ.ಮೀ ಮಳೆಯಾಗಿದೆ’ ಎಂದು ಹವಮಾನ ಇಲಾಖೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT