ಉತ್ತರ ಕರ್ನಾಟಕ ಭಾಗದ ನೀಲಿ, ಸೋನಾಕ ಸೂಪರ್, ಕೃಷ್ಣ ಶರದ್, ಜಂಬೂ ಶರದ್, ಥಾಮಸ್ ಸೀಡ್ಲೆಸ್ ಸೇರಿದಂತೆ ವಿವಿಧ ತಳಿಯ ದ್ರಾಕ್ಷಿಗಳು ಹಾಗೂ ಕಿರಣ ಮತ್ತು ನಾಮಧಾರಿ ಕಲ್ಲಂಗಡಿಗಳು ಮಾರಾಟಕ್ಕಿವೆ. ರಸಬಾಳೆ, ನೇಂದ್ರ ಬಾಳೆ, ಚಂದ್ರಬಾಳೆ, ಸಕ್ಕರೆ ಬಾಳೆ, ರಾಮಫಲ, ಮುಳ್ಳು ರಾಮ್ಫಲ, ಚಕೋತಾ, ಸಿಟ್ರಾನ್, ಕಿನೋ ಮ್ಯಾಂಡ್ರಿನ್, ಕರ್ಬೂಜ ಹಣ್ಣುಗಳು ಹಾಗೂ ತರಕಾರಿ, ಸಿರಿಧಾನ್ಯಗಳೂ ಇಲ್ಲಿ ಲಭ್ಯ.ದ್ರಾಕ್ಷಿ ಬೆಳೆಗಾರರಿಗಾಗಿ ಆಧುನಿಕ ತಾಂತ್ರಿಕತೆ ಕುರಿತು ಕಾರ್ಯಗಾರ ಆಯೋಜಿಸಲಾಗಿತ್ತು.
***
ಅಂಕಿ–ಅಂಶ