ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಆಶ್ರಮ ವೃತ್ತದಿಂದ ಬಿ.ಎಸ್.ಎನ್.ಎಲ್ ಕಚೇರಿವರೆಗಿನ ರಸ್ತೆಯಲ್ಲಿ ಮೇ 26ರಿಂದ ಜುಲೈ 2ರವರೆಗೆ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಹಳ್ಳಿ ತಿಂಡಿ ಜಂಕ್ಷನ್, ನಾರಾಯಣಸ್ವಾಮಿ ವೃತ್ತ, ಗಾಂಧಿ ಬಜಾರ್ ಕಡೆಯಿಂದ ಬುಲ್ ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ 5ನೇ ಮುಖ್ಯರಸ್ತೆಗೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆದು ವಾಣಿ ವಿಲಾಸ್ರಸ್ತೆ, ರಂಗರಾವ್ ರಸ್ತೆ, ಶಂಕರಮಠ ಜಂಕ್ಷನ್ ಮೂಲಕ ಸಂಚರಿಸಬಹುದು.