‘ಅರಕೆರೆ, ಮಾರಸಂದ್ರ, ಕಡತನಮಲೆ, ನೆಲ್ಲು ಕುಂಟೆ ಗ್ರಾಮಗಳಲ್ಲಿ ಗೋಮಾಳ, ಗುಂಡುತೋಪು, ಸ್ಮಶಾನ, ಕೆರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗವನ್ನು ವಶಪಡಿಸಿಕೊಂಡು, ವಸತಿಹೀನರಿಗೆ ಮನೆ, ಸಮುದಾಯಭವನ, ತರಬೇತಿ ಕೇಂದ್ರ, ಬುದ್ಧವಿಹಾರ ನಿರ್ಮಿಸಬೇಕು’ ಎಂದು ಪಕ್ಷದ ರಾಜ್ಯ ಘಟಕದ ಸಂಯೋಜಕ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.