ನಂತರದಲ್ಲಿ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಮೂಲಕ ಇಬ್ಬರ ನಡುವೆ ಸಲುಗೆ ಬೆಳೆದಿತ್ತು.ಕಳೆದ ಆಗಸ್ಟ್ 25ರಂದು ಯುವತಿ, ಶಿವಕುಮಾರ್ಗೆ ಮೊಬೈಲ್ ಕರೆ ಮಾಡಿ ಬೆಂಗಳೂರು ಹೊರವಲಯದ ಸಿಯಾನ್ ರೆಸ್ಟೊ ಕೆಫೆ ಎಂಬಲ್ಲಿಗೆ ಕರೆಸಿಕೊಂಡಿದ್ದರು. ಇಬ್ಬರು ಹೋಟೆಲ್ನ ಕೊಠಡಿಯಲ್ಲಿ ಇದ್ದಾಗಲೇ ಒಳನುಗ್ಗಿದ್ದ ಸುರೇಶ್ ನೇತೃತ್ವದ ಐದಾರು ಜನರ ಗುಂಪು ಶಿವಕುಮಾರ್ ಮೇಲೆ ಹಲ್ಲೆ ಮಾಡಿತ್ತು. ಶೆಟ್ಟಿ ಅವರ ಜೊತೆಗೆ ಯುವತಿಯನ್ನು ನಿಲ್ಲಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿತ್ತು. ಅವರ ಬಳಿ ಇದ್ದ ₹9 ಸಾವಿರವನ್ನೂ ಕಸಿದುಕೊಂಡಿತ್ತು.