<p>ಔರಾದ್: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಬಸವ ವಸತಿ ಯೋಜನೆಯಡಿ ಕಳೆದ ಸಾಲಿನಲ್ಲಿ ಮಂಜೂರಿಯಾದ 7428 ಮನೆಗಳ ಪೈಕಿ 1896 ಮನೆಗಳು ಮಂಜೂರಾತಿ ರದ್ದು ಆಗಿರುವುದು ಫಲಾನುಭವಿಗಳಿಗೆ ಆತಂಕ ಉಂಟುಮಾಡಿದೆ.<br /> <br /> ಈ ಫಲಾನುಭವಿಗಳ ಪೈಕಿ ಸಾಕಷ್ಟು ಜನ ಸಾಲ ತಂದು ತಳಪಾಯ ಮತ್ತು ನೆಂಟಲ್ ವರೆಗೆ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಇವರು ಮನೆ ಕಟ್ಟಿಕೊಳ್ಳುತ್ತಿದ್ದಾರೆ ಎಂಬುದು ನಿಗಮದ ಆನ್ಲೈನಲ್ಲಿ ನೊಂದಣಿ ಆಗಿಲ್ಲ. ನಿಯಮಾನುಸಾರ ಒಂದು ವರ್ಷದೊಳಗೆ ನೊಂದಣಿ ಆಗದಿದ್ದಲ್ಲಿ ಆ ಮನೆಗಳ ಮಂಜೂರಾತಿ ಲ್ಯಾಪ್ಸ್ ಆಗಲಿದೆ.<br /> <br /> ಈ ಬಗ್ಗೆ ಆತಂಕಗೊಂಡ ವಿವಿಧ ಗ್ರಾಮಗಳ ಫಲಾನುಭವಿಗಳು ಗುರುವಾರ ಶಾಸಕ ಪ್ರಭು ಚವ್ಹಾಣ್ ಮತ್ತು ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಗೋಳು ತೋಡಿಕೊಂಡಿದ್ದಾರೆ. ಈ ಬಗ್ಗೆ ತಾವು ನಿಗಮದ ವ್ಯವಸ್ಥಾಪರನ್ನು ಚರ್ಚಿಸಿ ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿಗಳು ಭರವಸೆ ನೀಡಿದರು. <br /> <br /> ಗ್ರಾಮವಾರು ಮಾಹಿತಿ: ಹಂಚಿಕೆಯಾಗಿ ನೊಂದಣಿ ಆಗದೆ ಇರುವ ಮನೆಗಳ ಗ್ರಾಮವಾರು ವಿವರ ಇಂತಿದೆ. ಬಾದಲಗಾಂವ್-5, ಬಳತ (ಬಿ)-7, ಬೆಳಕುಣಿ (ಬಿಎಚ್)-38, ಬೆಳಕುಣಿ (ಸಿ)-158, ಚಿಕ್ಲಿ (ಜೆ)-168, ಚಿಕ್ಲಿ (ಯು)-1 ಚಿಮೆಗಾಂವ್-5, ದಾಬಕಾ-9, ಧುಪತಮಹಾಗಾಂವ್-26, ಡೋಣಗಾಂವ್ (ಎಂ)-78, ಎಕಂಬಾ-132, ಎಕಲಾರ-41, ಹೆಡಗಾಪುರ-238, ಹೊಳಸಮುದ್ರ-21, ಜಮಗಿ+270, ಜೋಜನಾ-54, ಕಮಲನಗರ-191, ಖೇಡ್-78, ಕೌಠಾ (ಬಿ)-2, ಮುಧೋಳ(ಬಿ)-24, ಮುರ್ಕಿ-1, ಶೆಂಬೆಳ್ಳಿ-1, ಸೋನಾಳ-24, ಠಾಣಾಕುಶನೂರ-324.<br /> <br /> ಆಗಿರುವ ತಪ್ಪು ಆದಷ್ಟು ಬೇಗ ಸರಿಪಡಿಸಿಕೊಂಡರೆ ರಾಜೀವ್ ಗಾಂಧಿ ವಸತಿ ನಿಗಮದವರು ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಾರ್ಯಪ್ರವೃತ್ತರಾಗಲು ಸೂಚನೆ ನೀಡಲಾಗಿದೆ.<br /> <br /> ಇಂದು ನಡೆದ ವಸತಿ ನಿಗಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್, ಜಿಪಂ. ಕಾರ್ಯನಿರ್ವಹಣಾಧಿಕಾರಿ ಮೀರ್ ಅಲೀಸ್ ಅಹಮ್ಮದ್, ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ, ಮುಖ್ಯಾಧಿಕಾರಿ ಅಶೋಕ ಕಾಳಗಿ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔರಾದ್: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಬಸವ ವಸತಿ ಯೋಜನೆಯಡಿ ಕಳೆದ ಸಾಲಿನಲ್ಲಿ ಮಂಜೂರಿಯಾದ 7428 ಮನೆಗಳ ಪೈಕಿ 1896 ಮನೆಗಳು ಮಂಜೂರಾತಿ ರದ್ದು ಆಗಿರುವುದು ಫಲಾನುಭವಿಗಳಿಗೆ ಆತಂಕ ಉಂಟುಮಾಡಿದೆ.<br /> <br /> ಈ ಫಲಾನುಭವಿಗಳ ಪೈಕಿ ಸಾಕಷ್ಟು ಜನ ಸಾಲ ತಂದು ತಳಪಾಯ ಮತ್ತು ನೆಂಟಲ್ ವರೆಗೆ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಇವರು ಮನೆ ಕಟ್ಟಿಕೊಳ್ಳುತ್ತಿದ್ದಾರೆ ಎಂಬುದು ನಿಗಮದ ಆನ್ಲೈನಲ್ಲಿ ನೊಂದಣಿ ಆಗಿಲ್ಲ. ನಿಯಮಾನುಸಾರ ಒಂದು ವರ್ಷದೊಳಗೆ ನೊಂದಣಿ ಆಗದಿದ್ದಲ್ಲಿ ಆ ಮನೆಗಳ ಮಂಜೂರಾತಿ ಲ್ಯಾಪ್ಸ್ ಆಗಲಿದೆ.<br /> <br /> ಈ ಬಗ್ಗೆ ಆತಂಕಗೊಂಡ ವಿವಿಧ ಗ್ರಾಮಗಳ ಫಲಾನುಭವಿಗಳು ಗುರುವಾರ ಶಾಸಕ ಪ್ರಭು ಚವ್ಹಾಣ್ ಮತ್ತು ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಗೋಳು ತೋಡಿಕೊಂಡಿದ್ದಾರೆ. ಈ ಬಗ್ಗೆ ತಾವು ನಿಗಮದ ವ್ಯವಸ್ಥಾಪರನ್ನು ಚರ್ಚಿಸಿ ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿಗಳು ಭರವಸೆ ನೀಡಿದರು. <br /> <br /> ಗ್ರಾಮವಾರು ಮಾಹಿತಿ: ಹಂಚಿಕೆಯಾಗಿ ನೊಂದಣಿ ಆಗದೆ ಇರುವ ಮನೆಗಳ ಗ್ರಾಮವಾರು ವಿವರ ಇಂತಿದೆ. ಬಾದಲಗಾಂವ್-5, ಬಳತ (ಬಿ)-7, ಬೆಳಕುಣಿ (ಬಿಎಚ್)-38, ಬೆಳಕುಣಿ (ಸಿ)-158, ಚಿಕ್ಲಿ (ಜೆ)-168, ಚಿಕ್ಲಿ (ಯು)-1 ಚಿಮೆಗಾಂವ್-5, ದಾಬಕಾ-9, ಧುಪತಮಹಾಗಾಂವ್-26, ಡೋಣಗಾಂವ್ (ಎಂ)-78, ಎಕಂಬಾ-132, ಎಕಲಾರ-41, ಹೆಡಗಾಪುರ-238, ಹೊಳಸಮುದ್ರ-21, ಜಮಗಿ+270, ಜೋಜನಾ-54, ಕಮಲನಗರ-191, ಖೇಡ್-78, ಕೌಠಾ (ಬಿ)-2, ಮುಧೋಳ(ಬಿ)-24, ಮುರ್ಕಿ-1, ಶೆಂಬೆಳ್ಳಿ-1, ಸೋನಾಳ-24, ಠಾಣಾಕುಶನೂರ-324.<br /> <br /> ಆಗಿರುವ ತಪ್ಪು ಆದಷ್ಟು ಬೇಗ ಸರಿಪಡಿಸಿಕೊಂಡರೆ ರಾಜೀವ್ ಗಾಂಧಿ ವಸತಿ ನಿಗಮದವರು ಮತ್ತೊಮ್ಮೆ ನೊಂದಣಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಿತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಾರ್ಯಪ್ರವೃತ್ತರಾಗಲು ಸೂಚನೆ ನೀಡಲಾಗಿದೆ.<br /> <br /> ಇಂದು ನಡೆದ ವಸತಿ ನಿಗಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್, ಜಿಪಂ. ಕಾರ್ಯನಿರ್ವಹಣಾಧಿಕಾರಿ ಮೀರ್ ಅಲೀಸ್ ಅಹಮ್ಮದ್, ತಾಪಂ. ಅಧ್ಯಕ್ಷ ಶ್ರೀರಂಗ ಪರಿಹಾರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚೆನ್ನಬಸಪ್ಪ, ಮುಖ್ಯಾಧಿಕಾರಿ ಅಶೋಕ ಕಾಳಗಿ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>