ಬೀದರ್: ಜೀವನ ಪ್ರಕಾಶ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಸ್ಥೆಯು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಅ. 23 ರಂದು ಬೆಳಿಗ್ಗೆ 11ಕ್ಕೆ ಅಂಗವಿಕಲರಿಗಾಗಿ ಕಲಾ ಪ್ರತಿಭೋತ್ಸವ ಹಮ್ಮಿಕೊಂಡಿದೆ.
ಅಂಗವಿಕಲ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವುದು ಕಲಾ ಪ್ರತಿಭೋತ್ಸವ ಆಯೋಜನೆ ಉದ್ದೇಶವಾಗಿದೆ ಎಂದು ಜೀವನ ಪ್ರಕಾಶ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ ತಿಳಿಸಿದ್ದಾರೆ.
ಕಲಾ ಪ್ರತಿಭೋತ್ಸವದಲ್ಲಿ ವಿಚಾರ ಸಂಕಿರಣ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಜನಪದ ಗಾಯನ, ತಾಳವಾದ್ಯ, ಭಜನೆ, ಗಜಲ್ ಪ್ರದರ್ಶನ ನಡೆಯಲಿವೆ ಎಂದು ಹೇಳಿದ್ದಾರೆ.