<p><strong>ಬೀದರ್: </strong>ಹುಮನಾಬಾದ್ ತಾಲ್ಲೂಕಿನ ಹಣಕುಣಿಯ ತಂದೆ ತಾಯಿ ಕಳೆದುಕೊಂಡ ಅನಾಥರಾದ ಅಶ್ವಿನಿ ಹಾಗೂ ಮಹಾನಂದಾ ಅವರ ಮನೆಗೆ ಭಾನುವಾರ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಬಾಲಕಿಯರಿಗೆ ಧೈರ್ಯ ತುಂಬಿದ್ದಾರೆ.</p>.<p>ಪ್ರಜಾವಾಣಿಯ ಮಕ್ಕಳ ಆಸರೆ ಕಸಿದ ಕೊರೊನಾ ಅಂಕಣದಲ್ಲಿ ‘ಅವ್ವ ನಿತ್ಯ ಕಣ್ಮುಂದೆ ಬರುತ್ತಿದ್ದಾಳೆ’ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಶಾಸಕ ರಾಜಶೇಖರ ಪಾಟೀಲ ಅವರು ವೈಯಕ್ತಿಕವಾಗಿ ₹50 ಸಾವಿರ ಕೊಟ್ಟು ಶಿಕ್ಷಣದ ವೆಚ್ಚವನ್ನೂ ಭರಿಸ ಲಾಗುವುದು ಎಂದು ತಿಳಿಸಿದರು.</p>.<p>‘ಕಂದಾಯ ಇಲಾಖೆ ಬಾಲಕಿಯರ ತಾಯಿಯ ಅಂತ್ಯ ಸಂಸ್ಕಾರಕ್ಕೆ ₹5 ಸಾವಿರ ಕೊಡಬೇಕಿತ್ತು. ಅದನ್ನು ಬಿಡುಗಡೆ ಮಾಡಿಸಲಾಗುವುದು. ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆಯಿಂದ ₹20 ಸಾವಿರ ಒದಗಿಸಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.</p>.<p>‘ಮಣ್ಣಿನ ಮನೆ ಕಂಡು ಶಾಸಕರು ಸರ್ಕಾರದಿಂದ ಮನೆ ಮಂಜೂರು ಮಾಡಿಸುವ ಭರವಸೆ ಕೊಟ್ಟಿದ್ದಾರೆ’ ಎಂದು ಬಾಲಕಿಯರ ಸೋದರತ್ತೆ ಲಕ್ಷ್ಮೀ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಇಒ ಡಾ.ಗೋವಿಂದ, ಚಿಕ್ಕಪ್ಪ ಮಾಣಿಕರೆಡ್ಡಿ, ಮಹಾನಂದಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಹುಮನಾಬಾದ್ ತಾಲ್ಲೂಕಿನ ಹಣಕುಣಿಯ ತಂದೆ ತಾಯಿ ಕಳೆದುಕೊಂಡ ಅನಾಥರಾದ ಅಶ್ವಿನಿ ಹಾಗೂ ಮಹಾನಂದಾ ಅವರ ಮನೆಗೆ ಭಾನುವಾರ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಭೇಟಿ ನೀಡಿ ಬಾಲಕಿಯರಿಗೆ ಧೈರ್ಯ ತುಂಬಿದ್ದಾರೆ.</p>.<p>ಪ್ರಜಾವಾಣಿಯ ಮಕ್ಕಳ ಆಸರೆ ಕಸಿದ ಕೊರೊನಾ ಅಂಕಣದಲ್ಲಿ ‘ಅವ್ವ ನಿತ್ಯ ಕಣ್ಮುಂದೆ ಬರುತ್ತಿದ್ದಾಳೆ’ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಶಾಸಕ ರಾಜಶೇಖರ ಪಾಟೀಲ ಅವರು ವೈಯಕ್ತಿಕವಾಗಿ ₹50 ಸಾವಿರ ಕೊಟ್ಟು ಶಿಕ್ಷಣದ ವೆಚ್ಚವನ್ನೂ ಭರಿಸ ಲಾಗುವುದು ಎಂದು ತಿಳಿಸಿದರು.</p>.<p>‘ಕಂದಾಯ ಇಲಾಖೆ ಬಾಲಕಿಯರ ತಾಯಿಯ ಅಂತ್ಯ ಸಂಸ್ಕಾರಕ್ಕೆ ₹5 ಸಾವಿರ ಕೊಡಬೇಕಿತ್ತು. ಅದನ್ನು ಬಿಡುಗಡೆ ಮಾಡಿಸಲಾಗುವುದು. ರಾಷ್ಟ್ರೀಯ ಭದ್ರತಾ ಕುಟುಂಬ ಯೋಜನೆಯಿಂದ ₹20 ಸಾವಿರ ಒದಗಿಸಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.</p>.<p>‘ಮಣ್ಣಿನ ಮನೆ ಕಂಡು ಶಾಸಕರು ಸರ್ಕಾರದಿಂದ ಮನೆ ಮಂಜೂರು ಮಾಡಿಸುವ ಭರವಸೆ ಕೊಟ್ಟಿದ್ದಾರೆ’ ಎಂದು ಬಾಲಕಿಯರ ಸೋದರತ್ತೆ ಲಕ್ಷ್ಮೀ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಇಒ ಡಾ.ಗೋವಿಂದ, ಚಿಕ್ಕಪ್ಪ ಮಾಣಿಕರೆಡ್ಡಿ, ಮಹಾನಂದಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>