<p><strong>ಬೀದರ್</strong>: ಬ್ಯಾಂಕ್ ಸಂಘಗಳ ಒಕ್ಕೂಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಬ್ಯಾಂಕುಗಳ ನೌಕರರು ನಗರದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.</p>.<p>ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ಬಿಐ) ಮುಖ್ಯ ಶಾಖೆ ಎದುರು ಮುಷ್ಕರ ನಡೆಸಿ, ಘೋಷಣೆ ಹಾಕಿದರು.</p>.<p>ನಾಲ್ಕನೇ ಶನಿವಾರ, ಭಾನುವಾರ, ಸೋಮವಾರ ಗಣರಾಜ್ಯೋತ್ಸವ ಹೀಗೆ ಮೂರು ದಿನ ಬ್ಯಾಂಕ್ಗಳು ಕೆಲಸ ನಿರ್ವಹಿಸಲಿಲ್ಲ. ಮುಷ್ಕರದಿಂದ ಬ್ಯಾಂಕಿನ ಸೇವೆಗಳು ಅಸ್ತವ್ಯಸ್ತಗೊಂಡವು. </p>.<p>‘ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು. ಶನಿವಾರ ಸಂಪೂರ್ಣ ರಜೆ ಘೋಷಿಸಬೇಕು. ನಮ್ಮ ಈ ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಮಾನ್ಯ ಮಾಡಿಲ್ಲ. ಶನಿವಾರ ರಜೆ ನೀಡಿದರೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ನಿರ್ವಹಿಸಲು ನೌಕರರು ಸಿದ್ಧರಿದ್ದಾರೆ’ ಎಂದು ಒಕ್ಕೂಟದ ಬೀದರ್ ಘಟಕದ ಸಂಚಾಲಕ ರಮೇಶ್ ಶಿಂಧೆ ಹೇಳಿದರು.</p>.<p>ಸಂತೋಷಕುಮಾರ ಮಿತ್ರಾ, ಪರಮೇಶ್ವರ ರೆಡ್ಡಿ, ಶಶಿಕಾಂತ ಕಾಳೆ, ಶೇಖ್ ನಿಸಾರ್, ಸಿದ್ರಾಮ ಸೀತಾ, ಅಶೋಕಕುಮಾರ ಮಾಲಿ ಬಿರಾದಾರ, ಸುಧಾರಾಣಿ, ಲಲಿತಾ ಬಿರಾದಾರ, ದೀಪಿಕಾ ಮೋರೆ, ಕೆನರಾ ಬ್ಯಾಂಕಿನ ಸಂತೋಷ ಪರಮ್ಮಾ, ಚಂದ್ರಶೇಖರ, ಸಂತೋಷ ಕೋರೆ, ಸಚಿನ್ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಬ್ಯಾಂಕ್ ಸಂಘಗಳ ಒಕ್ಕೂಟ ವೇದಿಕೆಯ ನೇತೃತ್ವದಲ್ಲಿ ವಿವಿಧ ಬ್ಯಾಂಕುಗಳ ನೌಕರರು ನಗರದಲ್ಲಿ ಮಂಗಳವಾರ ಮುಷ್ಕರ ನಡೆಸಿದರು.</p>.<p>ನಗರದ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ಬಿಐ) ಮುಖ್ಯ ಶಾಖೆ ಎದುರು ಮುಷ್ಕರ ನಡೆಸಿ, ಘೋಷಣೆ ಹಾಕಿದರು.</p>.<p>ನಾಲ್ಕನೇ ಶನಿವಾರ, ಭಾನುವಾರ, ಸೋಮವಾರ ಗಣರಾಜ್ಯೋತ್ಸವ ಹೀಗೆ ಮೂರು ದಿನ ಬ್ಯಾಂಕ್ಗಳು ಕೆಲಸ ನಿರ್ವಹಿಸಲಿಲ್ಲ. ಮುಷ್ಕರದಿಂದ ಬ್ಯಾಂಕಿನ ಸೇವೆಗಳು ಅಸ್ತವ್ಯಸ್ತಗೊಂಡವು. </p>.<p>‘ವಾರದಲ್ಲಿ ಐದು ದಿನಗಳಷ್ಟೇ ಕೆಲಸ ಇರಬೇಕು. ಶನಿವಾರ ಸಂಪೂರ್ಣ ರಜೆ ಘೋಷಿಸಬೇಕು. ನಮ್ಮ ಈ ಎರಡು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಮಾನ್ಯ ಮಾಡಿಲ್ಲ. ಶನಿವಾರ ರಜೆ ನೀಡಿದರೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ನಿರ್ವಹಿಸಲು ನೌಕರರು ಸಿದ್ಧರಿದ್ದಾರೆ’ ಎಂದು ಒಕ್ಕೂಟದ ಬೀದರ್ ಘಟಕದ ಸಂಚಾಲಕ ರಮೇಶ್ ಶಿಂಧೆ ಹೇಳಿದರು.</p>.<p>ಸಂತೋಷಕುಮಾರ ಮಿತ್ರಾ, ಪರಮೇಶ್ವರ ರೆಡ್ಡಿ, ಶಶಿಕಾಂತ ಕಾಳೆ, ಶೇಖ್ ನಿಸಾರ್, ಸಿದ್ರಾಮ ಸೀತಾ, ಅಶೋಕಕುಮಾರ ಮಾಲಿ ಬಿರಾದಾರ, ಸುಧಾರಾಣಿ, ಲಲಿತಾ ಬಿರಾದಾರ, ದೀಪಿಕಾ ಮೋರೆ, ಕೆನರಾ ಬ್ಯಾಂಕಿನ ಸಂತೋಷ ಪರಮ್ಮಾ, ಚಂದ್ರಶೇಖರ, ಸಂತೋಷ ಕೋರೆ, ಸಚಿನ್ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>