ಜನವಾಡ: ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ಸಾಂಪ್ರದಾಯಿಕ ಬುತ್ತಿ ಜಾತ್ರೆ ನಡೆಯಿತು.
ಗ್ರಾಮಸ್ಥರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಒಂದೆಡೆ ಸೇರಿ ಊಟ ಮಾಡಿದರು. ಕಬಡ್ಡಿ, ಕೊಕ್ಕೋ ಸ್ಪರ್ಧೆ, ಕುದರೆ ಕುಣಿತ, ಜಾನಪದ ಗೀತೆ ಗಾಯನ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ವೀರಶೆಟ್ಟಿ ಪಾಟೀಲ, ರಾಜಕುಮಾರ ಚಿಲಮೆನೋರ, ಸಂಜು ಮಲಕನೋರ, ಜಗನ್ನಾಥ, ಬಸವಾ ಬಿರಾದಾರ, ನಸರಪ್ಪ ಜಟನೋರ, ಮಂಜುನಾಥ ಮಲಕನೋರ, ಮಲ್ಲಿಕಾರ್ಜುನ ಮಲಕನೋರ, ಶ್ರೀಕಾಂತ ಸ್ವಾಮಿ ಸೋಲಪುರ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.