ಹುಮನಾಬಾದ್: ಬಿಜೆಪಿಯ ಜನ ಸಂಕಲ್ಪ ಯಾತ್ರೆಗಾಗಿ ಪಟ್ಟಣದ ತೇರು ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ.
ಪ್ರವಾಸಿ ಮಂದಿರದ ಮುಂಭಾಗ, ಎಪಿಎಂಸಿ ಗೇಟ್, ಕೇಂದ್ರ ಬಸ್ ನಿಲ್ದಾಣದ ಮುಂಭಾಗ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವೀರಭದ್ರೇಶ್ವರ ಅಗ್ನಿಕುಂಡ ಹಾಗೂ ಹಳೆ ತಹಶೀಲ್ ಕಚೇರಿ, ಬಾಲಾಜಿ ಮಂದಿರ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಸೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾನ ರ್ಗಳು ರಾರಾಜಿಸುತ್ತಿವೆ.
ಗಣ್ಯರ ಆಗಮನಕ್ಕಾಗಿ ವಿಶೇಷ ದ್ವಾರ ಮಾಡಲಾಗಿದೆ. ಕಾರ್ಯಕರ್ತರಿಗಾಗಿ ಮತ್ತೊಂದು ಪ್ರವೇಶ ದ್ವಾರ ನಿರ್ಮಿಸಲಾಗಿದೆ.
ಪಟ್ಟಣದ ಈದ್ಗಾ ಮೈದಾನದ ಹತ್ತಿರ ಒಡ್ಡುರು ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಪೊಲೀಸ್ ಬೀಗಿ ಬಂದೋಬಸ್ತ್: ಜನಸಂಕಲ್ಪ ಯಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭದ್ರತೆಗಾಗಿ ಎಸ್ಪಿ, ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ 2, ಪಿಐ 6, ಪಿಎಸ್ಐ 29, ಎಎಸ್ಐ 32, 304 ಪುರುಷ ಸಿಬ್ಬಂದಿ, 60 ಮಹಿಳಾ ಸಿಬ್ಬಂದಿ ಹಾಗೂ 175 ಜನ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಮೂರು ಡಿಆರ್ ತುಕಡಿ ಹಾಗೂ ಕೆಎಸ್ಆರ್ಪಿಯ ಒಂದು ತುಕಡಿ ನಿಯೋಜಿಸಲಾಗಿದೆ.