ಶುಕ್ರವಾರ (ಫೆ.9) ಯಡಿಯೂರಪ್ಪನವರು ಬಸವಕಲ್ಯಾಣದ ಆಧುನಿಕ ಅನುಭವ ಮಂಟಪದ ಕಾಮಗಾರಿ ವೀಕ್ಷಣೆಗೆ ಬರುವವರಿದ್ದರು. ಬಳಿಕ ಪಕ್ಷದ ಮುಖಂಡರೊಂದಿಗೆ ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸುವವರಿದ್ದರು. ‘ಯಡಿಯೂರಪ್ಪನವರ ಆರೋಗ್ಯ ಸರಿ ಇಲ್ಲದ ಕಾರಣ ಪ್ರವಾಸ ರದ್ದುಗೊಳಿಸಿದ್ದಾರೆ. ಫೆಬ್ರುವರಿ ಮೂರನೇ ವಾರದ ನಂತರ ಜಿಲ್ಲೆಗೆ ಬರುತ್ತಾರೆ’ ಎಂದು ಬಿಜಿಪಿ ಜಿ್ಲಾಧ್ಯಕ್ಷ ಸೋಮನಾಥ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.