ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧೇರಾ| ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಎಲ್‍ಇಡಿ ಬಲ್ಬ್ ಉಚಿತ ವಿತರಣೆ

Last Updated 2 ಮಾರ್ಚ್ 2023, 11:17 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಬುಧೇರಾ ಗ್ರಾಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ, ಮುಖಂಡರ ಸನ್ಮಾನ ಹಾಗೂ ಎಲ್‍ಇಡಿ ಬಲ್ಬ್ ಉಚಿತ ವಿತರಣೆ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ವಿಧಾನಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.

ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ ಹಾಗೂ ಕರೀಂಸಾಬ್ ಕಮಠಾಣ ಅವರು ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಧ್ವಜ ಕೊಟ್ಟು ಕಾಂಗ್ರೆಸ್‍ಗೆ ಬರಮಾಡಿಕೊಂಡರು.

ಮುಖಂಡರು ಹಾಗೂ ಮಹಿಳೆಯರಿಗೆ ಎಲ್‍ಇಡಿ ಬಲ್ಬ್ ಉಚಿತ ವಿತರಿಸಲಾಯಿತು.

ಮುಖಂಡರಾದ ಶಫಿ ಬುಧೇರಾ, ರಾಜಕುಮಾರ ಸಜ್ಜನಶೆಟ್ಟಿ, ಸಂಗಾರೆಡ್ಡಿ, ಮೆಹಬೂಬ್ ಸಾಬ್, ಜಗನ್ನಾಥ, ಸಂತೋಷ, ಸಂತೋಷ ಪಾಟೀಲ, ಉದಯಕುಮಾರ ಚಟ್ನಳ್ಳಿ, ರಾಜಕುಮಾರ ಮಡಕಿ, ಚಂದ್ರಕಾಂತ ಶೇರಿಕಾರ್, ಮೋಹಿನ್ ಪಠಾಣ, ಕುಪೇಂದ್ರ, ಲೋಕೇಶ ಕನಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT