ಮನೆ ಮಂಜೂರು: ಶಾಸಕ ಶರಣು ಸಲಗರ ಅವರು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಕ್ಷೇತ್ರದ ಉಸ್ತುವಾರಿಗಳಾಗಿ ಗೆಲುವಿಗೆ ಸಹಕರಿಸಿದಕ್ಕೆ ಅವರನ್ನು ಸನ್ಮಾನಿಸಿದರು. ಕ್ಷೇತ್ರದಲ್ಲಿ 18,000 ಜನರಿಗೆ ಮನೆಗಳ ಅಗತ್ಯವಿದ್ದು ಶೀಘ್ರ ಮಂಜೂರು ಮಾಡಬೇಕು ಎಂದು ಮನವಿಪತ್ರ ಕೂಡ ಸಲ್ಲಿಸಿದರು.