ರುದ್ರಭೂಮಿಯಲ್ಲಿ ರಸ್ತೆ, ನೀರು, ಸ್ವಚ್ಛತೆ ವ್ಯವಸ್ಥೆ ಇಲ್ಲದೇ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ. ರುದ್ರಭೂಮಿಯೆಲ್ಲೆಡೆ ಮುಳ್ಳು ಕಂಟಿ ಬೆಳೆದಿದ್ದು, ಜನ ನಡೆದುಕೊಂಡು ಹೋಗುವುದು ಕಷ್ಟವಾಗಿದೆ. ಸುತ್ತಲಿನ ಪ್ರದೇಶ ಅನಧಿಕೃತವಾಗಿ ನಾಗರಿಕರು ಆಕ್ರಮಿಸುತ್ತಿದ್ದು, ಕಾಂಪೌಂಡ್ ನಿರ್ಮಿಸುವ ಅಗತ್ಯವಿದೆ ಎಂದು ಮಡಿವಾಳೇಶ್ವರ ಗವಿ ದೇಗುಲದ ಅಧ್ಯಕ್ಷ ರವಿ ಶಿವಪೂಜಿ ಆಗ್ರಹಿಸಿದ್ದಾರೆ.