ಬೀದರ್: ಕೋವಿಡ್ ಪ್ರಯುಕ್ತ ಕಾರ್ಮಿಕ ಇಲಾಖೆ ವತಿಯಿಂದ ಇಲ್ಲಿಯ ವಾರ್ಡ್ ಸಂಖ್ಯೆ 18 ರ ವ್ಯಾಪ್ತಿಯ ಶಹಾಗಂಜ್ನಲ್ಲಿ ಸಾಯಿ ಕಾಲೊನಿ, ಹನುಮಾನ ನಗರ, ನಂದಿ ಕಾಲೊನಿ ಹಾಗೂ ಶಹಾಗಂಜ್ನ 128 ಮಂದಿ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹಾಗೂ ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ ಕಿಟ್ ವಿತರಣೆಗೆ ಜಂಟಿಯಾಗಿ ಚಾಲನೆ ನೀಡಿದರು.
ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಬಿಜೆಪಿ ಸರ್ಕಾರ ಆಹಾರಧಾನ್ಯ ಕಿಟ್ ವಿತರಣೆ ಮೂಲಕ ನೆರವಾಗುತ್ತಿದೆ ಎಂದು ಉಲ್ಲಾಸಿನಿ ಹೇಳಿದರು.
ಬೀದರ್ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ, ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಹೀಗಾಗಿ ಸಾರ್ವಜನಿಕರು ತಪ್ಪದೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಯುವ ಮುಖಂಡ ವಿಕ್ರಮ ಮುದಾಳೆ, ಕೆ. ಸಿದ್ರಾಮೇಶ್ವರ ರೆಡ್ಡಿ, ವಿನಾಯಕ ಮುದಾಳೆ, ಸಂತೋಷ ನಿಂಬೂರೆ, ಶರಣು ಬಿರಾದಾರ, ಶಿವಕುಮಾರ ಸ್ವಾಮಿ, ಮಹೇಶ ಮಡಕಿ, ಸಂತೋಷ ಭಂಗೂರೆ ಇದ್ದರು.