ಬೀದರ್: ನಗರದಲ್ಲಿ ವಿವೇಕಾನಂದ ಕಾಲೊನಿ (ಗುಂಪಾ) ಅಭಿವೃದ್ಧಿ ಸಮಿತಿ ವತಿಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಹಾಗೂ ಅವರ ಪತ್ನಿ ಡಾ. ಯೋಗೇಶ್ವರಿ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಬಬ್ರುವಾಹನ ಸಜ್ಜನ, ಯೋಗೇಂದ್ರ ಯದಲಾಪುರೆ, ರವಿ ಶೆಂಬೆಳ್ಳಿ, ಸೂರ್ಯಕಾಂತ ಮಾಳಗೆ, ಗಣಪತರಾವ್ ದಡ್ಡೆ, ವಿಠ್ಠಲರಾವ್, ಸುನೀಲ್ ಬಿರಾದಾರ, ಕವಿತಾ, ಮಹಾನಂದಾ ಇದ್ದರು.
ಸಮಿತಿಯ ಅಧ್ಯಕ್ಷ ಸಂಜುಕುಮಾರ ಸಜ್ಜನ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪುತ್ರ ಪಾಟೀಲ ನಿರೂಪಿಸಿದರು. ಸುನಿಲ್ ಅಮಲಾಪುರೆ ವಂದಿಸಿದರು.