ಬಸವಕಲ್ಯಾಣ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯಿಂದ ಆರಂಭಿಸಲಾದ ಬಳ್ಳಾರಿವರೆಗಿನ ಕಾಲ್ನಡಿಗೆ ಜಾಥಾಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಮಲ್ಲಿಕಾರ್ಜುನ ರೆಡ್ಡಿ, ಮಹಾದೇವರೆಡ್ಡಿ, ಪ್ರಸಾದ, ಬಾಬುರಾವ್ ಕಮಲಾಪುರ, ಗಂಗುರೆಡ್ಡಿ, ಕಾಳಿದಾಸ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ದೀಪಕ ಮಾಲಗಾರ ಮುಂತಾದವರು ಪಾಲ್ಗೊಂಡಿದ್ದರು.