ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡದ ಜೆಸ್ಕಾಂ: ಸಾರ್ವಜನಿಕರಿಗೆ ತಪ್ಪದ ಪರದಾಟ

Published : 1 ಜುಲೈ 2024, 5:08 IST
Last Updated : 1 ಜುಲೈ 2024, 5:08 IST
ಫಾಲೋ ಮಾಡಿ
Comments
ಪದೇ ಪದೆ ವಿದ್ಯುತ್ ತೆಗೆಯುತ್ತಿರುವುದರಿಂದ ಹೋಟೆಲ್‌ ಸೈಬರ್‌ ಸೆಂಟರ್‌ ಝರಾಕ್ಸ್ ಕಂಪ್ಯೂಟರ್ ಟೈಪಿಂಗ್ ಕೇಂದ್ರದವರು ಬೇಸತ್ತು ಹೋಗಿದ್ದಾರೆ. 
ಅಶೋಕ ದಿಡಗೆ ವ್ಯಾಪಾರಿ
ಕಬ್ಬು ಭತ್ತ ತರಕಾರಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಅಭಾವ ಉಂಟಾಗುತ್ತಿದೆ. ಕೂಡಲೇ ವಿದ್ಯುತ್‌ ಸಮಸ್ಯೆಯನ್ನು ಬಗೆಹರಿಸಬೇಕು.
ಪ್ರಕಾಶ್ ಹಳ್ಳಿಖೇಡ್‌ (ಕೆ)
ನೀರು ವಿದ್ಯುತ್‌ ಸಮಸ್ಯೆ ಸಾಮಾನ್ಯವಾಗಿದೆ. ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ರೈತರು ಪರದಾಡುವಂತಾಗಿದೆ.
ಚಂದ್ರಕಾಂತ ಬೋರಂಪಳ್ಳಿ ಹುಮನಾಬಾದ್‌ ನಿವಾಸಿ
‘ಗಿಡ ಮರಗಳು ಹೆಚ್ಚಿವೆ’
ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್‌ ಜಿಲ್ಲೆಯಲ್ಲಿ ಗಿಡ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿದ್ಯುತ್‌ ತಂತಿಗಳಿಗೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಮಸ್ಯೆಯಾಗುತ್ತದೆ. ಅದನ್ನು ಸರಿಪಡಿಸಲು ಅನಿವಾರ್ಯವಾಗಿ ವಿದ್ಯುತ್‌ ಕಡಿತಗೊಳಿಸಬೇಕಾಗುತ್ತದೆ ಎಂದು ಜೆಸ್ಕಾಂ ಬೀದರ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಗೃಹಜ್ಯೋತಿ’ ಜಾರಿಗೂ ಮೊದಲಿನಿಂದ ಸಮಸ್ಯೆ
ಬೀದರ್‌ ಜಿಲ್ಲೆಯಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ವರ್ಷಕ್ಕೂ ಹೆಚ್ಚು ಸಮಯದಿಂದ ಇದೆ. ಹೋದ ವರ್ಷ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಜ್ಯೋತಿ’ ಯೋಜನೆ ಜಾರಿಗೊಳಿಸುವುದಕ್ಕೂ ಮೊದಲಿನಿಂದ ಅಸಮರ್ಪಕ ವಿದ್ಯುತ್‌ ಪೂರೈಕೆಗೆ ಜನ ಬೇಸತ್ತಿದ್ದಾರೆ. ಯೋಜನೆ ಜಾರಿಗೆ ಬಂದ ನಂತರವೂ ಅದು ಬದಲಾಗಿಲ್ಲ.
ಬೃಹತ್‌ ಕೈಗಾರಿಕೆಗಳಿರದ ಜಿಲ್ಲೆ
ಬೀದರ್‌ ಜಿಲ್ಲೆಯ ಹುಮನಾಬಾದ್‌ ಬೀದರ್‌ನ ಕೊಳಾರ ಕೈಗಾರಿಕೆ ಪ್ರದೇಶ ಹೊರತುಪಡಿಸಿದರೆ ಜಿಲ್ಲೆಯ ಇತರೆ ಆರು ತಾಲ್ಲೂಕುಗಳಲ್ಲಿ ಕೈಗಾರಿಕೆಗಳೇ ಇಲ್ಲ. ಬೀದರ್‌ ಹುಮನಾಬಾದ್‌ನಲ್ಲೂ ರಾಸಾಯನಿಕ ಫಾರ್ಮಸುಟಿಕಲ್ಸ್‌ ಟೈರ್‌ ಪೈರೋಲಿಸಿಸ್‌ನಂತಹ ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. ಬೃಹತ್‌ ಕೈಗಾರಿಕೆಗಳಿಲ್ಲ. ಹೀಗಿದ್ದರೂ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸಲು ಜೆಸ್ಕಾಂಗೆ ಸಾಧ್ಯವಾಗುತ್ತಿಲ್ಲ. ಬೃಹತ್‌ ಕೈಗಾರಿಕೆಗಳಿಗೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಲು ಕೆಲವೊಮ್ಮೆ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುವುದಿಲ್ಲ. ಆದರೆ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಯೇ ಇಲ್ಲ. ಹೀಗಿದ್ದರೂ ಗ್ರಾಹಕರಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT