2009ರಲ್ಲಿ ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಭವನದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಸ್ವಾಮೀಜಿಗಳು ರಾಜಕೀಯ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಭೀಮಣ್ಣ ಖಂಡ್ರೆ
ಕಾರ್ಯಕ್ರಮವೊಂದರಲ್ಲಿ ತಂದೆ–ಮಗನ ಚರ್ಚೆ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಅವರ ಪರ ಪ್ರಚಾರ ಕೈಗೊಂಡಿದ್ದ ಭೀಮಣ್ಣ ಖಂಡ್ರೆ
ವೀರಶೈವ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಒತ್ತಾಯಿಸಿ ಸೋನಿಯಾ ಗಾಂಧಿ ಬಳಿ ನಿಯೋಗ ಕರೆದೊಯ್ದು ಭೇಟಿ ಮಾಡಿಸಿದ್ದ ಭೀಮಣ್ಣ ಖಂಡ್ರೆ

ಭೀಮಣ್ಣ ಖಂಡ್ರೆಯವರು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಕಟ್ಟಾ ಶಿಷ್ಯರಾಗಿದ್ದರು. ಗುರುವಿನ ನೆಚ್ಚಿನ ಶಿಷ್ಯರಾಗಿ ಸಮಾಜೋಧಾರ್ಮಿಕ ಕೆಲಸ ಮಾಡಿದ್ದರು.
–ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
ಭೀಮಣ್ಣ ಖಂಡ್ರೆಯವರು ಲಿಂಗಾಯತ ಸಮಾಜ ಹಾಗೂ ಈ ನಾಡಿಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಅವರು ಭೌತಿಕ ಇಲ್ಲವಾದರೂ ಅವರ ಕೆಲಸದಿಂದ ಸದಾ ಜೀವಂತವಾಗಿರುತ್ತಾರೆ
–ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಭಾಲ್ಕಿ ಹಿರೇಮಠ ಸಂಸ್ಥಾನ
ಭೀಮಣ್ಣ ಖಂಡ್ರೆಯವರು ಅವರ ಕೆಲಸಗಳ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿದ್ದಾರೆ. ನಾಡು ನುಡಿಗಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ.
–ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರು
ಭೀಮಣ್ಣ ಖಂಡ್ರೆ ಹಾಗೂ ಅವರ ಕುಟುಂಬದ ಕೊಡುಗೆ ಈ ನಾಡಿಗೆ ಬಹಳ ದೊಡ್ಡದಿದೆ. ಅವರ ಋಣ ಸಮಾಜ ಎಂದಿಗೂ ಮರೆಯಲಾರದು.
–ತಡೋಳಾ ರಾಜೇಶ್ವರ ಶಿವಾಚಾರ್ಯರು