‘ಕುವೆಂಪು ಅವರ ಇಡೀ ಸಾಹಿತ್ಯದ ಕೇಂದ್ರದ ಆಶಯ, ವೈಚಾರಿಕತೆಯ ಸಮಸಮಾಜ ನಿರ್ಮಾಣ, ಸಾಮಾಜಿಕ ಅನಿಷ್ಠಗಳ ವಿರುದ್ಧ ಬರವಣಿಗೆಯ ಮೂಲಕ ಪ್ರತಿಭಟಿಸಿದ್ದಾರೆ. ಸಮಾಜ, ಧರ್ಮ, ರಾಜಕೀಯ ಹಾಗೂ ಧಾರ್ಮಿಕ ವಲಯಗಳು ಜಾತಿ ಸಂಕೋಲೆಗಳ ಭ್ರಮೆಗಳನ್ನು ಸೃಷ್ಟಿಸಿಕೊಂಡಿದ್ದು, ದೊಡ್ಡ ದುರಂತ. ಅದರಿಂದ ಹೊರಬರಬೇಕಾದರೆ ಕುವೆಂಪು ಅವರ ಸಾಹಿತ್ಯ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.