'ಕೃಷಿಯಲ್ಲಿ ಯಶಸ್ಸು ಕಾಣುವುದು ಕನಸಿನ ಮಾತು ಎಂದು ಭಾವಿಸಿದ್ದೆ. ಆದರೆ, ಕೃಷಿ ಇಲಾಖೆ ನಡೆಸಿದ ಸಂವಾದ, ಪ್ರಾತ್ಯಕ್ಷಿಕೆಯಿಂದ ಸ್ವಲ್ಪ ವಿಶ್ವಾಸ ಬಂತು. ತೋಟಗಾರಿಕೆ ಇಲಾಖೆಯವರು ಸೂಕ್ತ ಮಾರ್ಗದರ್ಶನ ನೀಡಿದ ಕಾರಣ ಈಗ ನನ್ನ 3 ಎಕರೆ ಜಮೀನು ಬಂಗಾರ ಕೊಡುವ ಭೂಮಿಯಾಗಿ ಮಾರ್ಪಟ್ಟಿದೆ' ಎಂದು ರೈತ ದೀಪಕ ಪಾಟೀಲ ಆತ್ಮವಿಶ್ವಾಸದಿಂದ
ಹೇಳುತ್ತಾರೆ.