<p><strong>ಔರಾದ್:</strong> ಸಾಂಪ್ರದಾಯಿಕ ಬೆಳೆ ಬೆಳೆದು ಸದಾ ಅನುಭವಿಸುತ್ತಿದ್ದ ತಾಲ್ಲೂಕಿನ ರೈತರೊಬ್ಬರು ತೋಟಗಾರಿಕೆ ಬೆಳೆ ಕಡೆ ಮುಖ ಮಾಡಿ ಯಶಸ್ಸು ಸಾಧಿಸಿದ್ದಾರೆ.</p>.<p>ನಾಗೂರ (ಎಂ) ಗ್ರಾಮದ ರೈತ ದೀಪಕ ಪಾಟೀಲ ತೋಟಗಾರಿಕೆ ಬೆಳೆಗಳಾದ ನಿಂಬೆ, ಹುಣಸೆ ಜತೆಗೆ ತರಕಾರಿ ಬೆಳೆದು ಅದರಲ್ಲಿ ಖುಷಿ ಕಂಡಿದ್ದಾರೆ.</p>.<p>ಪಾಟೀಲರಿಗೆ 10 ಎಕರೆ ಜಮೀನು ಇದ್ದರೂ ಉಪಜೀವನಕ್ಕೂ ಪರದಾಡುವಂತಹ ಪರಿಸ್ಥಿತಿ ಇತ್ತು. ಇಂತಹ ಸಂಕಷ್ಟದ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್ನಿಂದ ಆರ್ಥಿಕ ನೆರವು ಮತ್ತು ಕೃಷಿ ಇಲಾಖೆಯಿಂದ ಸಲಹೆ ಪಡೆದ ಅವರು ಬರಡು ಜಮೀನಿನಲ್ಲಿ ತೋಟಗಾರಿಕೆ ಕೃಷಿ ಆರಂಭಿಸಿದರು.</p>.<p>ಕೊಳವೆಬಾವಿ ಕೊರೆಸಿ ಮೂರು ಎಕರೆ ಜಮೀನನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದರು. ನಾಟಿ ಮಾಡಿದ 500 ನಿಂಬೆ ಗಿಡಗಳು ಕಳೆದ ವರ್ಷದಿಂದ ಇಳುವರಿ ಕೊಡುತ್ತಿವೆ. ಆರಂಭದ ವರ್ಷ ₹ 80 ಸಾವಿರ ಆದಾಯ ಬಂದಿತ್ತು. ಈ ವರ್ಷ ₹ 1 ಲಕ್ಷಕ್ಕೂ ಹೆಚ್ಚು ಅದಾಯ ಬರುವ ವಿಶ್ವಾಸವನ್ನು ಪಾಟೀಲರು ಹೊಂದಿದ್ದಾರೆ.</p>.<p>ನಿಂಬೆ ಜತೆಗೆ ಅಂತರ ಬೆಳೆಯಾಗಿ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವರ್ಷಕ್ಕೆ ₹25 ಸಾವಿರ ಬರುತ್ತಿದೆ. ಮಳೆ ಕೊರತೆಯಿಂದ ಬರದ ಬವಣೆಯಲ್ಲಿ ಬದುಕುತ್ತಿರುವ ರೈತ ದೀಪಕ ಈಗ ಕಡಿಮೆ ನೀರಲ್ಲಿ ಅತ್ಯುತ್ತಮ ಬೆಳೆ ಬೆಳೆದು ವರ್ಷವೀಡಿ ಕೆಲಸ ಹಾಗೂ ಕೈತುಂಬ ಹಣ ಮಾಡಿಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.</p>.<p>'ಕೃಷಿಯಲ್ಲಿ ಯಶಸ್ಸು ಕಾಣುವುದು ಕನಸಿನ ಮಾತು ಎಂದು ಭಾವಿಸಿದ್ದೆ. ಆದರೆ, ಕೃಷಿ ಇಲಾಖೆ ನಡೆಸಿದ ಸಂವಾದ, ಪ್ರಾತ್ಯಕ್ಷಿಕೆಯಿಂದ ಸ್ವಲ್ಪ ವಿಶ್ವಾಸ ಬಂತು. ತೋಟಗಾರಿಕೆ ಇಲಾಖೆಯವರು ಸೂಕ್ತ ಮಾರ್ಗದರ್ಶನ ನೀಡಿದ ಕಾರಣ ಈಗ ನನ್ನ 3 ಎಕರೆ ಜಮೀನು ಬಂಗಾರ ಕೊಡುವ ಭೂಮಿಯಾಗಿ ಮಾರ್ಪಟ್ಟಿದೆ' ಎಂದು ರೈತ ದೀಪಕ ಪಾಟೀಲ ಆತ್ಮವಿಶ್ವಾಸದಿಂದ<br />ಹೇಳುತ್ತಾರೆ.</p>.<p>'ನಿಂಬೆ 15-20 ವರ್ಷದವರೆಗೆ ಇಳುವರಿ ಕೊಡುತ್ತವೆ. ಈ ಗಿಡಗಳ ನಡುವೆ 70 ಹುಣಸೆ ಸಸಿ ನಾಟಿ ಮಾಡಿದ್ದೇನೆ. ಎಂಟು ವರ್ಷದ ನಂತರ ಅವು ಕೂಡ ಇಳುವರಿ ಕೊಡುತ್ತವೆ. ಹೀಗಾಗಿ ನನಗೆ ಈಗ ನಿರ್ವಹಣೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಆತಂಕ ಇಲ್ಲ' ಎನ್ನುತ್ತಾರೆ ಅವರು.</p>.<p>ಸೋಲಾರ್ ಬಳಕೆ: ನಿಂಬೆ ಗಿಡಗಳಿಗೆ ಜಾನುವಾರುಗಳ ಕಾಟ ತಪ್ಪಿಸಲು ಮೂರು ಎಕರೆ ಜಮೀನು ಸುತ್ತ ಹಾಕಲಾದ ತಂತಿಗೆ ಸೋಲಾರ ವಿದ್ಯುತ್ ಹರಿಸಲಾಗಿದೆ. ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತಿದ್ದು, ಉತ್ತಮ ಇಳುವರಿ ಬರುತ್ತಿದೆ' ಎಂದು ಅವರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ಸಾಂಪ್ರದಾಯಿಕ ಬೆಳೆ ಬೆಳೆದು ಸದಾ ಅನುಭವಿಸುತ್ತಿದ್ದ ತಾಲ್ಲೂಕಿನ ರೈತರೊಬ್ಬರು ತೋಟಗಾರಿಕೆ ಬೆಳೆ ಕಡೆ ಮುಖ ಮಾಡಿ ಯಶಸ್ಸು ಸಾಧಿಸಿದ್ದಾರೆ.</p>.<p>ನಾಗೂರ (ಎಂ) ಗ್ರಾಮದ ರೈತ ದೀಪಕ ಪಾಟೀಲ ತೋಟಗಾರಿಕೆ ಬೆಳೆಗಳಾದ ನಿಂಬೆ, ಹುಣಸೆ ಜತೆಗೆ ತರಕಾರಿ ಬೆಳೆದು ಅದರಲ್ಲಿ ಖುಷಿ ಕಂಡಿದ್ದಾರೆ.</p>.<p>ಪಾಟೀಲರಿಗೆ 10 ಎಕರೆ ಜಮೀನು ಇದ್ದರೂ ಉಪಜೀವನಕ್ಕೂ ಪರದಾಡುವಂತಹ ಪರಿಸ್ಥಿತಿ ಇತ್ತು. ಇಂತಹ ಸಂಕಷ್ಟದ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್ನಿಂದ ಆರ್ಥಿಕ ನೆರವು ಮತ್ತು ಕೃಷಿ ಇಲಾಖೆಯಿಂದ ಸಲಹೆ ಪಡೆದ ಅವರು ಬರಡು ಜಮೀನಿನಲ್ಲಿ ತೋಟಗಾರಿಕೆ ಕೃಷಿ ಆರಂಭಿಸಿದರು.</p>.<p>ಕೊಳವೆಬಾವಿ ಕೊರೆಸಿ ಮೂರು ಎಕರೆ ಜಮೀನನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದರು. ನಾಟಿ ಮಾಡಿದ 500 ನಿಂಬೆ ಗಿಡಗಳು ಕಳೆದ ವರ್ಷದಿಂದ ಇಳುವರಿ ಕೊಡುತ್ತಿವೆ. ಆರಂಭದ ವರ್ಷ ₹ 80 ಸಾವಿರ ಆದಾಯ ಬಂದಿತ್ತು. ಈ ವರ್ಷ ₹ 1 ಲಕ್ಷಕ್ಕೂ ಹೆಚ್ಚು ಅದಾಯ ಬರುವ ವಿಶ್ವಾಸವನ್ನು ಪಾಟೀಲರು ಹೊಂದಿದ್ದಾರೆ.</p>.<p>ನಿಂಬೆ ಜತೆಗೆ ಅಂತರ ಬೆಳೆಯಾಗಿ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವರ್ಷಕ್ಕೆ ₹25 ಸಾವಿರ ಬರುತ್ತಿದೆ. ಮಳೆ ಕೊರತೆಯಿಂದ ಬರದ ಬವಣೆಯಲ್ಲಿ ಬದುಕುತ್ತಿರುವ ರೈತ ದೀಪಕ ಈಗ ಕಡಿಮೆ ನೀರಲ್ಲಿ ಅತ್ಯುತ್ತಮ ಬೆಳೆ ಬೆಳೆದು ವರ್ಷವೀಡಿ ಕೆಲಸ ಹಾಗೂ ಕೈತುಂಬ ಹಣ ಮಾಡಿಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.</p>.<p>'ಕೃಷಿಯಲ್ಲಿ ಯಶಸ್ಸು ಕಾಣುವುದು ಕನಸಿನ ಮಾತು ಎಂದು ಭಾವಿಸಿದ್ದೆ. ಆದರೆ, ಕೃಷಿ ಇಲಾಖೆ ನಡೆಸಿದ ಸಂವಾದ, ಪ್ರಾತ್ಯಕ್ಷಿಕೆಯಿಂದ ಸ್ವಲ್ಪ ವಿಶ್ವಾಸ ಬಂತು. ತೋಟಗಾರಿಕೆ ಇಲಾಖೆಯವರು ಸೂಕ್ತ ಮಾರ್ಗದರ್ಶನ ನೀಡಿದ ಕಾರಣ ಈಗ ನನ್ನ 3 ಎಕರೆ ಜಮೀನು ಬಂಗಾರ ಕೊಡುವ ಭೂಮಿಯಾಗಿ ಮಾರ್ಪಟ್ಟಿದೆ' ಎಂದು ರೈತ ದೀಪಕ ಪಾಟೀಲ ಆತ್ಮವಿಶ್ವಾಸದಿಂದ<br />ಹೇಳುತ್ತಾರೆ.</p>.<p>'ನಿಂಬೆ 15-20 ವರ್ಷದವರೆಗೆ ಇಳುವರಿ ಕೊಡುತ್ತವೆ. ಈ ಗಿಡಗಳ ನಡುವೆ 70 ಹುಣಸೆ ಸಸಿ ನಾಟಿ ಮಾಡಿದ್ದೇನೆ. ಎಂಟು ವರ್ಷದ ನಂತರ ಅವು ಕೂಡ ಇಳುವರಿ ಕೊಡುತ್ತವೆ. ಹೀಗಾಗಿ ನನಗೆ ಈಗ ನಿರ್ವಹಣೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಆತಂಕ ಇಲ್ಲ' ಎನ್ನುತ್ತಾರೆ ಅವರು.</p>.<p>ಸೋಲಾರ್ ಬಳಕೆ: ನಿಂಬೆ ಗಿಡಗಳಿಗೆ ಜಾನುವಾರುಗಳ ಕಾಟ ತಪ್ಪಿಸಲು ಮೂರು ಎಕರೆ ಜಮೀನು ಸುತ್ತ ಹಾಕಲಾದ ತಂತಿಗೆ ಸೋಲಾರ ವಿದ್ಯುತ್ ಹರಿಸಲಾಗಿದೆ. ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತಿದ್ದು, ಉತ್ತಮ ಇಳುವರಿ ಬರುತ್ತಿದೆ' ಎಂದು ಅವರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>